<p><strong>ಕೋಲಾರ:</strong> ಹೊಸ ಸಂವತ್ಸರ ಆರಂಭದ ಮೊದಲ ಹಬ್ಬ ಯುಗಾದಿ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶದ ಮನೆಗಳಲ್ಲಿ ಸಂಭ್ರಮ ನೆಲೆಸಿದ್ದು, ಬುಧವಾರ ದಿನವಿಡೀ ಖರೀದಿ ಭರಾಟೆ ಜೋರಾಗಿತ್ತು. ಇನ್ನೊಂದೆಡೆ ಗುರುವಾರ ಹಬ್ಬ ಆಚರಿಸಲು ಭರದ ಸಿದ್ಧತೆ ನಡೆದಿತ್ತು. </p>.<p>ನಗರದ ಸಂತೆ ಮೈದಾನ, ಹೊಸ ಬಸ್ ನಿಲ್ದಾಣ ಸುತ್ತಮುತ್ತ, ಹಳೆ ಬಸ್ ನಿಲ್ದಾಣ, ಎಂ.ಜಿ.ರಸ್ತೆ, ದೊಡ್ಡಪೇಟೆ ಮಾರುಕಟ್ಟೆಯಲ್ಲಿ ಜನರು ಖರೀದಿಯಲ್ಲಿ ತೊಡಗಿದ್ದರು. ಹೀಗಾಗಿ, ಈ ಪ್ರದೇಶದಲ್ಲಿ ಜನಜಂಗುಳಿ ಹೆಚ್ಚಾಗಿ ವಾಹನ ದಟ್ಟಣೆ ಕಂಡುಬಂತು.</p>.<p>ತರಕಾರಿ, ಹೂವು, ಹಣ್ಣು ಹಾಗೂ ಬಟ್ಟೆ ಖರೀದಿಗೆ ಜನ ಮುಗಿಬಿದ್ದಿದ್ದರು. ಪೂಜಾ ಸಾಮಗ್ರಿ, ಬೇವು– ಮಾವಿನ ಎಲೆಗಳು, ಬಾಳೆ ದಿಂಡು, ಕಬ್ಬು, ಬೆಲ್ಲದ ಮಾರಾಟ ಬಿರುಸಿನಿಂದ ನಡೆಯಿತು. ಹೊಸ ಬಟ್ಟೆ ಖರೀದಿಸಲು ದೊಡ್ಡಪೇಟೆ, ಎಂ.ಜಿ.ರಸ್ತೆ, ಕಾಳಮ್ಮ ಗುಡಿ ರಸ್ತೆಯ ಬಟ್ಟೆ ಅಂಗಡಿಗಳಲ್ಲಿ ಹೆಚ್ಚು ಜನ ಸೇರಿದ್ದರು.</p>.<p>ಮಾವಿನ ಎಲೆ ನಗರದಲ್ಲಿ ಒಂದು ಸಣ್ಣಕಟ್ಟು ₹ 15ಕ್ಕೆ ಮಾರಾಟವಾಗುತ್ತಿತ್ತು. ಗಾತ್ರವನ್ನು ಆಧರಿಸಿ ತೆಂಗಿನ ಕಾಯಿಗಳನ್ನು ₹ 100ಕ್ಕೆ 3 ಅಥವಾ 4 ಮಾರಾಟ ಮಾಡಲಾಗುತ್ತಿದೆ. ವ್ಯಾಪಾರಿಗಳು ಮಾತ್ರ ಸುಡುಬಿಸಿಲಿನಲ್ಲಿಯೇ ಇಡೀ ದಿನ ವ್ಯಾಪಾರದಲ್ಲಿ ತೊಡಗಿದ್ದರು.</p>.<p>ತರಕಾರಿ ದರದಲ್ಲಿ ಕುಸಿತ ಕಂಡಿದೆ. ಆದರೆ, ಹಣ್ಣು ಹಾಗೂ ಹೂವಿನ ದರ ಹೆಚ್ಚಿದೆ. ಹೊಸ ತೊಡಕು ಆಚರಣೆಗೂ ಸಿದ್ಧತೆ ನಡೆದಿದ್ದು, ಕೋಳಿ ಹಾಗೂ ಕುರಿ ಮಾಂಸಕ್ಕೆ ಬೇಡಿಕೆ ಹೆಚ್ಚಿದೆ. ಧಾರಣೆಯೂ ಏರಿಕೆ ಆಗಿದೆ.</p>.<p>ಇನ್ನು ಮನೆಗಳಲ್ಲಿ ಸ್ವಚ್ಛತೆ ಕಾರ್ಯ ನಡೆಯಿತು. ವಾಹನ ಹಾಗೂ ಜಾನುವಾರುಗಳನ್ನು ಶುದ್ಧಗೊಳಿಸಿದರು. ಬಾಗಿಲುಗಳನ್ನು ಮಾವಿನ ತೋರಣ ಹಾಗೂ ಹೂವುಗಳಿಂದ ಸಿಂಗರಿಸಿದರು. ದೇಗುಲಗಳಲ್ಲೂ ವಿಶೇಷ ಪೂಜೆಗೆ ಸಿದ್ಧತೆ ನಡೆದಿದೆ. ಕೆಲವೆಡೆ ಜಾತ್ರೆ ಕೂಡ ನಡೆಯುತ್ತಿದೆ.</p>.<p>ಯುಗಾದಿ ದಿನವಾದ ಗುರುವಾರ ಮುಂಜಾನೆಯಿಂದಲೇ ಹಬ್ಬದ ಪೂಜಾ ಕಾರ್ಯಗಳು ಆರಂಭವಾಗಲಿವೆ. ಬೆಳಿಗ್ಗೆಯಿಂದಲೇ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಮಂಗಳಾರತಿ ನಡೆಯಲಿದೆ. ನೀರಿನಲ್ಲಿ ಬೇವಿನ ಎಲೆಗಳನ್ನು ಹಾಕಿ ಎಣ್ಣೆ ಹೆಚ್ಚಿಕೊಂಡು ಅಭ್ಯಂಗ ಸ್ನಾನ ಮಾಡುವರು. ಹೊಸ ಬಟ್ಟೆ ತೊಟ್ಟು ವಿವಿಧ ತಿನಿಸುಗಳನ್ನು ತಯಾರಿಸುವರು. ಬೇವು, ಬೆಲ್ಲವನ್ನು ಸವಿಯುವ ಜನರು ಚಂದ್ರನ ದರ್ಶನ ಮಾಡಲಿದ್ದಾರೆ. ಯುಗಾದಿಯಂದು ಹೊನ್ನೇರು ಕಟ್ಟುವುದಕ್ಕೆ ಹಳ್ಳಿಹಳ್ಳಿಗಳಲ್ಲಿ ಸಿದ್ಧತಾ ಕಾರ್ಯಗಳು ನಡೆದಿವೆ.</p>.<p>ಜಿಲ್ಲೆಯಲ್ಲಿ ‘ಪವಿತ್ರ ರಂಜಾನ್’ ಮಾಸದ ಸಂಭ್ರಮ ಮನೆಮಾಡಿದೆ. ಮುಸ್ಲಿಮರು ಫೆ. 20ರಿಂದ ಉಪವಾಸ ಆಚರಿಸುತ್ತಿದ್ದಾರೆ. ಮಾರ್ಚ್ 20 ಅಥವಾ 21ರಂದು ‘ಈದ್ ಉಲ್ ಫಿತ್ರ್’ ಆಚರಿಸಲು ಸಕಲ ಸಿದ್ಧತೆ ನಡೆಸಿದ್ದಾರೆ.</p>.<p>ಮುಸ್ಲಿಂ ಸಮುದಾಯದವರು ಹೆಚ್ಚಿರುವ ಪ್ರದೇಶಗಳಲ್ಲಿ ಬಟ್ಟೆ, ಆಹಾರ ಪದಾರ್ಥ, ದಿನಸಿ, ಹಣ್ಣುಗಳ ಖರೀದಿ ಭರಾಟೆ ಜೋರಾಗಿಯೇ ಇದೆ. ವಿವಿಧ ತಿನಿಸುಗಳ ತಯಾರಿ ಹಾಗೂ ಮಾರಾಟ ಭರದಿಂದ ನಡೆಯುತ್ತಿದೆ.</p>.<blockquote>ಬೆಲೆ ಏರಿಕೆ ಬಿಸಿಯಲ್ಲೂ ಭರ್ಜರಿ ವ್ಯಾಪಾರ</blockquote>.<p><strong>ಮುಳಬಾಗಿಲು:</strong> ಮಾರುಕಟ್ಟೆಯಲ್ಲಿ ಬೆಲೆಗಳು ಹೆಚ್ಚಾಗಿದ್ದರೂ ಯುಗಾದಿ ಹಬ್ಬ ಹಾಗೂ ಹೊಸತೊಡಕು ಪ್ರಯುಕ್ತ ಸಾರ್ವಜನಿಕರು ಮಾರುಕಟ್ಟೆಯಲ್ಲಿ ಮುಗಿಬಿದ್ದು ಹಬ್ಬದ ಸಾಮಾಗ್ರಿಗಳನ್ನು ಖರೀದಿಸುತ್ತಿದ್ದರು.</p><p>ಮುಳಬಾಗಿಲು ನಗರದ ಬಜಾರು ಬೀದಿ, ಬೈಯಪ್ಪನಹಳ್ಳಿ ವೃತ್ತ, ಡಿವಿಜಿ ವೃತ್ತ, ನಂಗಲಿ ಬಜಾರು ಬೀದಿ, ತಾಯಲೂರು ಬಸ್ ನಿಲ್ದಾಣ ಸುತ್ತಲೂ, ಹೆಬ್ಬಣಿ ಮುಖ್ಯ ರಸ್ತೆ ಇಕ್ಕೆಲಗಳಲ್ಲಿ, ಆವಣಿ, ಕಾಂತರಾಜ ವೃತ್ತ ಮತ್ತಿತರರ ಕಡೆಗಳಲ್ಲಿ ತಾಲ್ಲೂಕಿನ ಜನತೆ ಹಬ್ಬದ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯಗಳು ಕಂಡುಬಂದವು.</p><p>ಹಬ್ಬದ ಅಂಗವಾಗಿ ಬೆಳೆಗಳು ಏರಿಕೆಯಾದರೂ ಖರೀದಿ ಭರಾಟೆ ಜೋರಾಗಿತ್ತು. ನಗರದ ಬಜಾರು ಬೀದಿ ಹಾಗೂ ಡಿವಿಜಿ ವೃತ್ತದಲ್ಲಿ ಹಬ್ಬದ ಸಾಮಾನು ಖರೀದಿಸುವ ಜನಜಂಗುಲಿ ಹೆಚ್ಚಾಗಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು. ಹಾಗಾಗಿ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅಣ್ಣಯ್ಯ ನೇತೃತ್ವದಲ್ಲಿ ವಾಹನ ದಟ್ಟಣೆಯಾಗದಂತೆ ತಡೆದರು</p><p>ಇನ್ನು ಅಂಗಡಿಗಳ ಬಳಿ ಹಬ್ಬದ ಸಾಮಾನು ಖರೀದಿಸಲು ಜನ ಕಿಕ್ಕಿರಿದು ತುಂಬಿದ್ದರು. ಹಾಗಾಗಿ ತಾಲ್ಲೂಕಿನಲ್ಲಿ ಯುಗಾದಿ ಹಬ್ಬದ ಸಂಭ್ರಮ ಕಂಡು ಬಂತು.</p> .<blockquote>ಮಾರುಕಟ್ಟೆಯಲ್ಲಿ ಖರೀದಿ ಜೋರು</blockquote>.<p>ವೇಮಗಲ್: ಚೈತ್ರ ಮಾಸದಲ್ಲಿ ಹೊಸ ವರ್ಷದ ಸಡಗರ ಹೊತ್ತು ತರುವ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ವೇಮಗಲ್ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರು ಭರ್ಜರಿ ತಯಾರಿಯಲ್ಲಿದ್ದಾರೆ.</p><p>ಹಾಗಾಗಿ ಬುಧವಾರ ಬೆಳಗ್ಗೆಯಿಂದಲೇ ಪಟ್ಟಣದ ಪ್ರಮುಖ ವೃತ್ತ ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಯ ಭರಾಟೆ ಜೋರಾಗಿತ್ತು.</p><p>ವರ್ಷದ ಮೊದಲ ಹಬ್ಬವನ್ನು ಸಂಪ್ರದಾಯಿಕವಾಗಿ ಆಚರಿಸಲು ಪಟ್ಟಣದ ಜನತೆಗೆ ಬೆಲೆ ಏರಿಕೆಯ ಬಿಸಿ ನಡುವೆಯೂ ಸಂಭ್ರಮದಿಂದ ಸಾಮಾಗ್ರಿಗಳನ್ನು ಖರೀದಿಸುತ್ತಿದ್ದಾರೆ.</p><p>ಮಾರುಕಟ್ಟೆಯಲ್ಲಿ ಹೂವುಗಳ ದರ ಗಗನಕ್ಕೇರಿದೆ. ಕೆಜಿ ಮಲ್ಲಿಗೆ ಹೂವು ₹1,100, ಸೇವಂತಿ ಕೆಜಿ ₹200 ರಿಂದ ₹250ಕ್ಕೆ ಮಾರಾಟವಾಗುತ್ತಿವೆ. ಗುಲಾಬಿ 250 ಗ್ರಾಂ ಹಾಗೂ ಚೆಂಡು ಹೂ ₹40 ರಿಂದ ₹50ಕ್ಕೆ ಬಿಕರಿಯಾಗುತ್ತಿವೆ. ಅಲಂಕಾರಕ್ಕೆ ಬಳಸುವ ಹಾರಗಳು "ಗಾತ್ರಕ್ಕೆ ಅನುಗುಣವಾಗಿ ಮಾರಾಟವಾಗುತ್ತಿವೆ.</p><p>ಮಾವಿನ ಸೊಪ್ಪು ಹಾಗೂ ಬೇವಿನ ಸೊಪ್ಪಿಗೆ ಭಾರೀ ಬೇಡಿಗೆ ಇದ್ದು, ಒಂದು ಕಟ್ಟು ₹20 ರಿಂದ ₹25ಕ್ಕೆ ಮಾರಾಟವಾಗುತ್ತಿದೆ. ಜೊತೆಗೆ ತರಕಾರಿ ಬೆಲೆಯೂ ಸ್ವಲ್ಪ ಏರಿಕೆಯಾಗಿದೆ.</p><p>ಬಾಳೆಹಣ್ಣು ₹60 ರಿಂದ ₹80ರವೆರೆಗೆ ಮಾರಾಟವಾಗುತ್ತಿದೆ. ದ್ರಾಕ್ಷಿ ₹120 ರಿಂದ ₹140, ದಾಳಿಂಬೆ ₹220ಕ್ಕೆ ಬಿಕರಿಯಾಗುತ್ತಿದೆ. ಬೆಲೆಗಳು ಎಷ್ಟೇ ಹೆಚ್ಚಾಗಿದ್ದರೂ ಹಬ್ಬದ ಸಡಗರಕ್ಕೆ ಯಾವುದೇ ಕೊರತೆಯಾಗದಂತೆ ಗ್ರಾಹಕರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ.</p><p>ಪಟ್ಟಣದಾದ್ಯಂತ ಹಬ್ಬದ ಕಳೆ ಮನೆಮಾಡಿದ್ದು, ಗ್ರಾಮೀಣ ಸೊಗಡಿನ ಆಚರಣೆಗಳು ಮರುಕಳಿಸುತ್ತಿವೆ. ಹಬ್ಬದ ಸಂಭ್ರಮಕ್ಕೆ ಪೂರಕವಾಗಿ ಪಟ್ಟಣದ ರಸ್ತೆಬದಿಗಳಲ್ಲಿ ಹೆಣ್ಣು ಮಕ್ಕಳು ಸಡಗರದಿಂದ ಬಣ್ಣ ಬಣ್ಣದ ಬಳೆಗಳನ್ನು ಹಾಕಿಸಿಕೊಳ್ಳುತ್ತಿರುವುದು ಸಂಪ್ರದಾಯದ ಉಳಿವಿಗೆ ಸಾಕ್ಷಿಯಾಗಿದೆ.</p><p>ಯುಗಾದಿಯನ್ನು ಹೊಸ ಬಟ್ಟೆ ಧರಿಸಿ, ಪೂಜೆ ಸಲ್ಲಿಸಿ ಹೋಳಿಗೆ ಮಾಡಿ ಹೊಸ ವರ್ಷವನ್ನು ಸ್ವಾಗತಿಸಿ. ನಂತರ ಹೊಸ ತೊಡಕು ಆಚರಿಸಲು ಪಟ್ಟಣದ ಜನತೆ ತಯಾರಿ ನಡೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ಹೊಸ ಸಂವತ್ಸರ ಆರಂಭದ ಮೊದಲ ಹಬ್ಬ ಯುಗಾದಿ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶದ ಮನೆಗಳಲ್ಲಿ ಸಂಭ್ರಮ ನೆಲೆಸಿದ್ದು, ಬುಧವಾರ ದಿನವಿಡೀ ಖರೀದಿ ಭರಾಟೆ ಜೋರಾಗಿತ್ತು. ಇನ್ನೊಂದೆಡೆ ಗುರುವಾರ ಹಬ್ಬ ಆಚರಿಸಲು ಭರದ ಸಿದ್ಧತೆ ನಡೆದಿತ್ತು. </p>.<p>ನಗರದ ಸಂತೆ ಮೈದಾನ, ಹೊಸ ಬಸ್ ನಿಲ್ದಾಣ ಸುತ್ತಮುತ್ತ, ಹಳೆ ಬಸ್ ನಿಲ್ದಾಣ, ಎಂ.ಜಿ.ರಸ್ತೆ, ದೊಡ್ಡಪೇಟೆ ಮಾರುಕಟ್ಟೆಯಲ್ಲಿ ಜನರು ಖರೀದಿಯಲ್ಲಿ ತೊಡಗಿದ್ದರು. ಹೀಗಾಗಿ, ಈ ಪ್ರದೇಶದಲ್ಲಿ ಜನಜಂಗುಳಿ ಹೆಚ್ಚಾಗಿ ವಾಹನ ದಟ್ಟಣೆ ಕಂಡುಬಂತು.</p>.<p>ತರಕಾರಿ, ಹೂವು, ಹಣ್ಣು ಹಾಗೂ ಬಟ್ಟೆ ಖರೀದಿಗೆ ಜನ ಮುಗಿಬಿದ್ದಿದ್ದರು. ಪೂಜಾ ಸಾಮಗ್ರಿ, ಬೇವು– ಮಾವಿನ ಎಲೆಗಳು, ಬಾಳೆ ದಿಂಡು, ಕಬ್ಬು, ಬೆಲ್ಲದ ಮಾರಾಟ ಬಿರುಸಿನಿಂದ ನಡೆಯಿತು. ಹೊಸ ಬಟ್ಟೆ ಖರೀದಿಸಲು ದೊಡ್ಡಪೇಟೆ, ಎಂ.ಜಿ.ರಸ್ತೆ, ಕಾಳಮ್ಮ ಗುಡಿ ರಸ್ತೆಯ ಬಟ್ಟೆ ಅಂಗಡಿಗಳಲ್ಲಿ ಹೆಚ್ಚು ಜನ ಸೇರಿದ್ದರು.</p>.<p>ಮಾವಿನ ಎಲೆ ನಗರದಲ್ಲಿ ಒಂದು ಸಣ್ಣಕಟ್ಟು ₹ 15ಕ್ಕೆ ಮಾರಾಟವಾಗುತ್ತಿತ್ತು. ಗಾತ್ರವನ್ನು ಆಧರಿಸಿ ತೆಂಗಿನ ಕಾಯಿಗಳನ್ನು ₹ 100ಕ್ಕೆ 3 ಅಥವಾ 4 ಮಾರಾಟ ಮಾಡಲಾಗುತ್ತಿದೆ. ವ್ಯಾಪಾರಿಗಳು ಮಾತ್ರ ಸುಡುಬಿಸಿಲಿನಲ್ಲಿಯೇ ಇಡೀ ದಿನ ವ್ಯಾಪಾರದಲ್ಲಿ ತೊಡಗಿದ್ದರು.</p>.<p>ತರಕಾರಿ ದರದಲ್ಲಿ ಕುಸಿತ ಕಂಡಿದೆ. ಆದರೆ, ಹಣ್ಣು ಹಾಗೂ ಹೂವಿನ ದರ ಹೆಚ್ಚಿದೆ. ಹೊಸ ತೊಡಕು ಆಚರಣೆಗೂ ಸಿದ್ಧತೆ ನಡೆದಿದ್ದು, ಕೋಳಿ ಹಾಗೂ ಕುರಿ ಮಾಂಸಕ್ಕೆ ಬೇಡಿಕೆ ಹೆಚ್ಚಿದೆ. ಧಾರಣೆಯೂ ಏರಿಕೆ ಆಗಿದೆ.</p>.<p>ಇನ್ನು ಮನೆಗಳಲ್ಲಿ ಸ್ವಚ್ಛತೆ ಕಾರ್ಯ ನಡೆಯಿತು. ವಾಹನ ಹಾಗೂ ಜಾನುವಾರುಗಳನ್ನು ಶುದ್ಧಗೊಳಿಸಿದರು. ಬಾಗಿಲುಗಳನ್ನು ಮಾವಿನ ತೋರಣ ಹಾಗೂ ಹೂವುಗಳಿಂದ ಸಿಂಗರಿಸಿದರು. ದೇಗುಲಗಳಲ್ಲೂ ವಿಶೇಷ ಪೂಜೆಗೆ ಸಿದ್ಧತೆ ನಡೆದಿದೆ. ಕೆಲವೆಡೆ ಜಾತ್ರೆ ಕೂಡ ನಡೆಯುತ್ತಿದೆ.</p>.<p>ಯುಗಾದಿ ದಿನವಾದ ಗುರುವಾರ ಮುಂಜಾನೆಯಿಂದಲೇ ಹಬ್ಬದ ಪೂಜಾ ಕಾರ್ಯಗಳು ಆರಂಭವಾಗಲಿವೆ. ಬೆಳಿಗ್ಗೆಯಿಂದಲೇ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಮಂಗಳಾರತಿ ನಡೆಯಲಿದೆ. ನೀರಿನಲ್ಲಿ ಬೇವಿನ ಎಲೆಗಳನ್ನು ಹಾಕಿ ಎಣ್ಣೆ ಹೆಚ್ಚಿಕೊಂಡು ಅಭ್ಯಂಗ ಸ್ನಾನ ಮಾಡುವರು. ಹೊಸ ಬಟ್ಟೆ ತೊಟ್ಟು ವಿವಿಧ ತಿನಿಸುಗಳನ್ನು ತಯಾರಿಸುವರು. ಬೇವು, ಬೆಲ್ಲವನ್ನು ಸವಿಯುವ ಜನರು ಚಂದ್ರನ ದರ್ಶನ ಮಾಡಲಿದ್ದಾರೆ. ಯುಗಾದಿಯಂದು ಹೊನ್ನೇರು ಕಟ್ಟುವುದಕ್ಕೆ ಹಳ್ಳಿಹಳ್ಳಿಗಳಲ್ಲಿ ಸಿದ್ಧತಾ ಕಾರ್ಯಗಳು ನಡೆದಿವೆ.</p>.<p>ಜಿಲ್ಲೆಯಲ್ಲಿ ‘ಪವಿತ್ರ ರಂಜಾನ್’ ಮಾಸದ ಸಂಭ್ರಮ ಮನೆಮಾಡಿದೆ. ಮುಸ್ಲಿಮರು ಫೆ. 20ರಿಂದ ಉಪವಾಸ ಆಚರಿಸುತ್ತಿದ್ದಾರೆ. ಮಾರ್ಚ್ 20 ಅಥವಾ 21ರಂದು ‘ಈದ್ ಉಲ್ ಫಿತ್ರ್’ ಆಚರಿಸಲು ಸಕಲ ಸಿದ್ಧತೆ ನಡೆಸಿದ್ದಾರೆ.</p>.<p>ಮುಸ್ಲಿಂ ಸಮುದಾಯದವರು ಹೆಚ್ಚಿರುವ ಪ್ರದೇಶಗಳಲ್ಲಿ ಬಟ್ಟೆ, ಆಹಾರ ಪದಾರ್ಥ, ದಿನಸಿ, ಹಣ್ಣುಗಳ ಖರೀದಿ ಭರಾಟೆ ಜೋರಾಗಿಯೇ ಇದೆ. ವಿವಿಧ ತಿನಿಸುಗಳ ತಯಾರಿ ಹಾಗೂ ಮಾರಾಟ ಭರದಿಂದ ನಡೆಯುತ್ತಿದೆ.</p>.<blockquote>ಬೆಲೆ ಏರಿಕೆ ಬಿಸಿಯಲ್ಲೂ ಭರ್ಜರಿ ವ್ಯಾಪಾರ</blockquote>.<p><strong>ಮುಳಬಾಗಿಲು:</strong> ಮಾರುಕಟ್ಟೆಯಲ್ಲಿ ಬೆಲೆಗಳು ಹೆಚ್ಚಾಗಿದ್ದರೂ ಯುಗಾದಿ ಹಬ್ಬ ಹಾಗೂ ಹೊಸತೊಡಕು ಪ್ರಯುಕ್ತ ಸಾರ್ವಜನಿಕರು ಮಾರುಕಟ್ಟೆಯಲ್ಲಿ ಮುಗಿಬಿದ್ದು ಹಬ್ಬದ ಸಾಮಾಗ್ರಿಗಳನ್ನು ಖರೀದಿಸುತ್ತಿದ್ದರು.</p><p>ಮುಳಬಾಗಿಲು ನಗರದ ಬಜಾರು ಬೀದಿ, ಬೈಯಪ್ಪನಹಳ್ಳಿ ವೃತ್ತ, ಡಿವಿಜಿ ವೃತ್ತ, ನಂಗಲಿ ಬಜಾರು ಬೀದಿ, ತಾಯಲೂರು ಬಸ್ ನಿಲ್ದಾಣ ಸುತ್ತಲೂ, ಹೆಬ್ಬಣಿ ಮುಖ್ಯ ರಸ್ತೆ ಇಕ್ಕೆಲಗಳಲ್ಲಿ, ಆವಣಿ, ಕಾಂತರಾಜ ವೃತ್ತ ಮತ್ತಿತರರ ಕಡೆಗಳಲ್ಲಿ ತಾಲ್ಲೂಕಿನ ಜನತೆ ಹಬ್ಬದ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯಗಳು ಕಂಡುಬಂದವು.</p><p>ಹಬ್ಬದ ಅಂಗವಾಗಿ ಬೆಳೆಗಳು ಏರಿಕೆಯಾದರೂ ಖರೀದಿ ಭರಾಟೆ ಜೋರಾಗಿತ್ತು. ನಗರದ ಬಜಾರು ಬೀದಿ ಹಾಗೂ ಡಿವಿಜಿ ವೃತ್ತದಲ್ಲಿ ಹಬ್ಬದ ಸಾಮಾನು ಖರೀದಿಸುವ ಜನಜಂಗುಲಿ ಹೆಚ್ಚಾಗಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು. ಹಾಗಾಗಿ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅಣ್ಣಯ್ಯ ನೇತೃತ್ವದಲ್ಲಿ ವಾಹನ ದಟ್ಟಣೆಯಾಗದಂತೆ ತಡೆದರು</p><p>ಇನ್ನು ಅಂಗಡಿಗಳ ಬಳಿ ಹಬ್ಬದ ಸಾಮಾನು ಖರೀದಿಸಲು ಜನ ಕಿಕ್ಕಿರಿದು ತುಂಬಿದ್ದರು. ಹಾಗಾಗಿ ತಾಲ್ಲೂಕಿನಲ್ಲಿ ಯುಗಾದಿ ಹಬ್ಬದ ಸಂಭ್ರಮ ಕಂಡು ಬಂತು.</p> .<blockquote>ಮಾರುಕಟ್ಟೆಯಲ್ಲಿ ಖರೀದಿ ಜೋರು</blockquote>.<p>ವೇಮಗಲ್: ಚೈತ್ರ ಮಾಸದಲ್ಲಿ ಹೊಸ ವರ್ಷದ ಸಡಗರ ಹೊತ್ತು ತರುವ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ವೇಮಗಲ್ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರು ಭರ್ಜರಿ ತಯಾರಿಯಲ್ಲಿದ್ದಾರೆ.</p><p>ಹಾಗಾಗಿ ಬುಧವಾರ ಬೆಳಗ್ಗೆಯಿಂದಲೇ ಪಟ್ಟಣದ ಪ್ರಮುಖ ವೃತ್ತ ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಯ ಭರಾಟೆ ಜೋರಾಗಿತ್ತು.</p><p>ವರ್ಷದ ಮೊದಲ ಹಬ್ಬವನ್ನು ಸಂಪ್ರದಾಯಿಕವಾಗಿ ಆಚರಿಸಲು ಪಟ್ಟಣದ ಜನತೆಗೆ ಬೆಲೆ ಏರಿಕೆಯ ಬಿಸಿ ನಡುವೆಯೂ ಸಂಭ್ರಮದಿಂದ ಸಾಮಾಗ್ರಿಗಳನ್ನು ಖರೀದಿಸುತ್ತಿದ್ದಾರೆ.</p><p>ಮಾರುಕಟ್ಟೆಯಲ್ಲಿ ಹೂವುಗಳ ದರ ಗಗನಕ್ಕೇರಿದೆ. ಕೆಜಿ ಮಲ್ಲಿಗೆ ಹೂವು ₹1,100, ಸೇವಂತಿ ಕೆಜಿ ₹200 ರಿಂದ ₹250ಕ್ಕೆ ಮಾರಾಟವಾಗುತ್ತಿವೆ. ಗುಲಾಬಿ 250 ಗ್ರಾಂ ಹಾಗೂ ಚೆಂಡು ಹೂ ₹40 ರಿಂದ ₹50ಕ್ಕೆ ಬಿಕರಿಯಾಗುತ್ತಿವೆ. ಅಲಂಕಾರಕ್ಕೆ ಬಳಸುವ ಹಾರಗಳು "ಗಾತ್ರಕ್ಕೆ ಅನುಗುಣವಾಗಿ ಮಾರಾಟವಾಗುತ್ತಿವೆ.</p><p>ಮಾವಿನ ಸೊಪ್ಪು ಹಾಗೂ ಬೇವಿನ ಸೊಪ್ಪಿಗೆ ಭಾರೀ ಬೇಡಿಗೆ ಇದ್ದು, ಒಂದು ಕಟ್ಟು ₹20 ರಿಂದ ₹25ಕ್ಕೆ ಮಾರಾಟವಾಗುತ್ತಿದೆ. ಜೊತೆಗೆ ತರಕಾರಿ ಬೆಲೆಯೂ ಸ್ವಲ್ಪ ಏರಿಕೆಯಾಗಿದೆ.</p><p>ಬಾಳೆಹಣ್ಣು ₹60 ರಿಂದ ₹80ರವೆರೆಗೆ ಮಾರಾಟವಾಗುತ್ತಿದೆ. ದ್ರಾಕ್ಷಿ ₹120 ರಿಂದ ₹140, ದಾಳಿಂಬೆ ₹220ಕ್ಕೆ ಬಿಕರಿಯಾಗುತ್ತಿದೆ. ಬೆಲೆಗಳು ಎಷ್ಟೇ ಹೆಚ್ಚಾಗಿದ್ದರೂ ಹಬ್ಬದ ಸಡಗರಕ್ಕೆ ಯಾವುದೇ ಕೊರತೆಯಾಗದಂತೆ ಗ್ರಾಹಕರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ.</p><p>ಪಟ್ಟಣದಾದ್ಯಂತ ಹಬ್ಬದ ಕಳೆ ಮನೆಮಾಡಿದ್ದು, ಗ್ರಾಮೀಣ ಸೊಗಡಿನ ಆಚರಣೆಗಳು ಮರುಕಳಿಸುತ್ತಿವೆ. ಹಬ್ಬದ ಸಂಭ್ರಮಕ್ಕೆ ಪೂರಕವಾಗಿ ಪಟ್ಟಣದ ರಸ್ತೆಬದಿಗಳಲ್ಲಿ ಹೆಣ್ಣು ಮಕ್ಕಳು ಸಡಗರದಿಂದ ಬಣ್ಣ ಬಣ್ಣದ ಬಳೆಗಳನ್ನು ಹಾಕಿಸಿಕೊಳ್ಳುತ್ತಿರುವುದು ಸಂಪ್ರದಾಯದ ಉಳಿವಿಗೆ ಸಾಕ್ಷಿಯಾಗಿದೆ.</p><p>ಯುಗಾದಿಯನ್ನು ಹೊಸ ಬಟ್ಟೆ ಧರಿಸಿ, ಪೂಜೆ ಸಲ್ಲಿಸಿ ಹೋಳಿಗೆ ಮಾಡಿ ಹೊಸ ವರ್ಷವನ್ನು ಸ್ವಾಗತಿಸಿ. ನಂತರ ಹೊಸ ತೊಡಕು ಆಚರಿಸಲು ಪಟ್ಟಣದ ಜನತೆ ತಯಾರಿ ನಡೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>