ಇದಕ್ಕೆ ಸ್ಪಂದಿಸಿದ ವರ್ತೂರು ಪ್ರಕಾಶ್, ‘ಸಾರಿಗೆ ನೌಕರರು ಸುಮಾರು 10 ದಿನದಿಂದ ನಿರಂತರ ಹೋರಾಟ ನಡೆಸುತ್ತಿದ್ದೀರಿ. ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿವೆ. ಆದರೆ, ರಾಜ್ಯ ಸರ್ಕಾರ ಬೇಡಿಕೆ ಈಡೇರಿಕೆಗೆ ಆಸಕ್ತಿ ತೋರದಿರುವುದು ಖಂಡನೀಯ. ಸರ್ಕಾರ ಮುಷ್ಕರನಿರತ ನೌಕರರ ಜತೆ ಸೌಜನ್ಯಕ್ಕೂ ಮಾತುಕತೆ ನಡೆಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.