<p>ವೇಮಗಲ್: ಪಟ್ಟಣದ ಸ್ಮಶಾನದಲ್ಲಿ ಸತ್ಯ ಹರಿಶ್ಚಂದ್ರ ದೇವಾಲಯ ನಿರ್ಮಾಣಕ್ಕಾಗಿ ಸೋಮವಾರ ಗುದ್ದಲಿ ಪೂಜೆ ನೆರವೇರಿಸಲಾಯಿತು.</p>.<p>ಈ ವೇಳೆ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ನಾಗೇಶ್ ಮಾತನಾಡಿ, ಸಾಮಾನ್ಯವಾಗಿ ಸ್ಮಶಾನ ಎಂದರೆ ಭಯದ ಭಾವನೆ ಜನರಲ್ಲಿದೆ. ಆದರೆ, ವಾಸ್ತವದಲ್ಲಿ ಅದು ಮನುಷ್ಯ ತನ್ನ ಅಹಂಕಾರವನ್ನು ಮರೆತು ಮಣ್ಣಾಗುವ ಪವಿತ್ರ ಸ್ಥಳ ಎಂದರು.</p>.<p>ಸತ್ಯಕ್ಕಾಗಿ ತನ್ನ ರಾಜ್ಯ, ಕೋಶ, ಪತ್ನಿ ಮತ್ತು ಮಗನನ್ನೇ ತ್ಯಜಿಸಿ ಸ್ಮಶಾನ ಕಾಯುವ ಕಾಯಕದಲ್ಲಿ ತೊಡಗಿದ್ದ ಮಹಾರಾಜ ಸತ್ಯ ಹರಿಶ್ಚಂದ್ರರ ಆದರ್ಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ. ಸಾವಿನ ಮನೆಯಲ್ಲೂ ಸತ್ಯಕ್ಕೆ ಚ್ಯುತಿ ಬಾರದಂತೆ ಬದುಕಿದ ಮಹಾಪುರುಷನ ದೇವಾಲಯ ನಿರ್ಮಿಸುತ್ತಿರುವುದು ಕೇವಲ ಧಾರ್ಮಿಕ ಕಾರ್ಯವಲ್ಲ. ಇದು ಜನರಲ್ಲಿ ಮೌಲ್ಯಗಳನ್ನು ಬಿತ್ತಲು ಮಾಡುತ್ತಿರುವ ಪ್ರಯತ್ನ ಎಂದರು.</p>.<p>ಧರ್ಮರಾಯಸ್ವಾಮಿ ದೇವಾಲಯ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಮಾತನಾಡಿ, ಹುಟ್ಟು ಮತ್ತು ಸಾವಿನ ನಡುವಿನ ಬದುಕಿನಲ್ಲಿ ಮನುಷ್ಯ ಸಂಪಾದಿಸಬೇಕಾದದ್ದು ಹಣವನ್ನಲ್ಲ. ಬದಲಾಗಿ ಚಾರಿತ್ರ್ಯವನ್ನು. ಸತ್ಯ ಹರಿಶ್ಚಂದ್ರ ಕೇವಲ ಒಂದು ಪುರಾಣದ ಕಥೆಯಲ್ಲ. ಅದು ಮನುಷ್ಯನ ಅಚಲವಾದ ಧರ್ಮನಿಷ್ಠೆಯ ಸಂಕೇತ. ನಾವು ಸ್ಮಶಾನದಲ್ಲಿ ಹರಿಶ್ಚಂದ್ರನ ಗುಡಿ ನಿರ್ಮಿಸುವ ಮೂಲಕ ಮನುಷ್ಯನ ಅಂತ್ಯದ ಕ್ಷಣಗಳಲ್ಲೂ ಸತ್ಯ ಮತ್ತು ಪ್ರಾಮಾಣಿಕತೆ ಗೌರವಿಸಲ್ಪಡಬೇಕೆಂಬ ಆಶಯ ಹೊಂದಿದ್ದೇವೆ ಎಂದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-18-1546328080</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವೇಮಗಲ್: ಪಟ್ಟಣದ ಸ್ಮಶಾನದಲ್ಲಿ ಸತ್ಯ ಹರಿಶ್ಚಂದ್ರ ದೇವಾಲಯ ನಿರ್ಮಾಣಕ್ಕಾಗಿ ಸೋಮವಾರ ಗುದ್ದಲಿ ಪೂಜೆ ನೆರವೇರಿಸಲಾಯಿತು.</p>.<p>ಈ ವೇಳೆ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ನಾಗೇಶ್ ಮಾತನಾಡಿ, ಸಾಮಾನ್ಯವಾಗಿ ಸ್ಮಶಾನ ಎಂದರೆ ಭಯದ ಭಾವನೆ ಜನರಲ್ಲಿದೆ. ಆದರೆ, ವಾಸ್ತವದಲ್ಲಿ ಅದು ಮನುಷ್ಯ ತನ್ನ ಅಹಂಕಾರವನ್ನು ಮರೆತು ಮಣ್ಣಾಗುವ ಪವಿತ್ರ ಸ್ಥಳ ಎಂದರು.</p>.<p>ಸತ್ಯಕ್ಕಾಗಿ ತನ್ನ ರಾಜ್ಯ, ಕೋಶ, ಪತ್ನಿ ಮತ್ತು ಮಗನನ್ನೇ ತ್ಯಜಿಸಿ ಸ್ಮಶಾನ ಕಾಯುವ ಕಾಯಕದಲ್ಲಿ ತೊಡಗಿದ್ದ ಮಹಾರಾಜ ಸತ್ಯ ಹರಿಶ್ಚಂದ್ರರ ಆದರ್ಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ. ಸಾವಿನ ಮನೆಯಲ್ಲೂ ಸತ್ಯಕ್ಕೆ ಚ್ಯುತಿ ಬಾರದಂತೆ ಬದುಕಿದ ಮಹಾಪುರುಷನ ದೇವಾಲಯ ನಿರ್ಮಿಸುತ್ತಿರುವುದು ಕೇವಲ ಧಾರ್ಮಿಕ ಕಾರ್ಯವಲ್ಲ. ಇದು ಜನರಲ್ಲಿ ಮೌಲ್ಯಗಳನ್ನು ಬಿತ್ತಲು ಮಾಡುತ್ತಿರುವ ಪ್ರಯತ್ನ ಎಂದರು.</p>.<p>ಧರ್ಮರಾಯಸ್ವಾಮಿ ದೇವಾಲಯ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಮಾತನಾಡಿ, ಹುಟ್ಟು ಮತ್ತು ಸಾವಿನ ನಡುವಿನ ಬದುಕಿನಲ್ಲಿ ಮನುಷ್ಯ ಸಂಪಾದಿಸಬೇಕಾದದ್ದು ಹಣವನ್ನಲ್ಲ. ಬದಲಾಗಿ ಚಾರಿತ್ರ್ಯವನ್ನು. ಸತ್ಯ ಹರಿಶ್ಚಂದ್ರ ಕೇವಲ ಒಂದು ಪುರಾಣದ ಕಥೆಯಲ್ಲ. ಅದು ಮನುಷ್ಯನ ಅಚಲವಾದ ಧರ್ಮನಿಷ್ಠೆಯ ಸಂಕೇತ. ನಾವು ಸ್ಮಶಾನದಲ್ಲಿ ಹರಿಶ್ಚಂದ್ರನ ಗುಡಿ ನಿರ್ಮಿಸುವ ಮೂಲಕ ಮನುಷ್ಯನ ಅಂತ್ಯದ ಕ್ಷಣಗಳಲ್ಲೂ ಸತ್ಯ ಮತ್ತು ಪ್ರಾಮಾಣಿಕತೆ ಗೌರವಿಸಲ್ಪಡಬೇಕೆಂಬ ಆಶಯ ಹೊಂದಿದ್ದೇವೆ ಎಂದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-18-1546328080</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>