ಬರಗಾಲದ ಕಾರಣದಿಂದ ಕೆರೆಯಲ್ಲಿ ನೀರು ಇಂಗಿ ಅಂತರ್ಜಲ ಹೆಚ್ಚುವ ಕಾರಣಕ್ಕೆ ನೀರನ್ನು ಯಾರೂ ಬಳಸದಂತೆ ಈಚೆಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೆ, ಕೋಡಿಯ ಕೆಳ ಭಾಗದ ಕಲ್ಲಿನ ಕಟ್ಟೆಯ ಕೆಳಗೆ ನೀರು ಸೋರಿಕೆಯಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೋಡಿ ದುರಸ್ತಿಗೆ ಮುಂದಾಗಬೇಕು ಎಂದು ಗ್ರಾಮಸ್ಥ ಕಿಶೋರ್ ಒತ್ತಾಯಿಸಿದರು.