‘ಯಲ್ದೂರು ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಮೂಲವಾದ ಗ್ರಾಮದ ಸಂತಮ್ಮನ ಕೆರೆಯ ಅಂಗಳದಲ್ಲಿನ ಕೊಳವೆ ಬಾವಿಗೆ ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರು ಹರಿಸಲಾಗುತ್ತಿತ್ತು. ಆದರೆ, ಕೆರೆಯು ಮಳೆಗೆ ಭರ್ತಿಯಾದ ಕಾರಣ ಆಗಾಗ್ಗೆ ವಿದ್ಯುತ್ ತಂತಿಗಳು ತುಂಡಾಗಿ ವಾಟರ್ಮನ್ಗೆ ವಿದ್ಯುತ್ ಪ್ರವಹಿಸಿ ಸಮಸ್ಯೆಯಾಗಿದ್ದು, ಪಿಡಿಒ ಪರಿಹಾರ ಕ್ರಮ ಕೈಗೊಂಡಿಲ್ಲ’ ಎಂದು ಗ್ರಾಮಸ್ಥರು ಆರೋಪಿಸಿದರು.