ಮತ್ತೊಂದೆಡೆ ಜೆಡಿಎಸ್ ಸದಸ್ಯರು ಪಕ್ಷಭೇದ ಮರೆತು ಕಾಂಗ್ರೆಸ್ ಅಭ್ಯರ್ಥಿಯ ಬೆನ್ನಿಗೆ ನಿಂತು ಗೆಲುವಿನ ದಡ ಸೇರಿಸಿದರು. ಮಾಜಿ ಶಾಸಕ ವರ್ತೂರು ಪ್ರಕಾಶ್ ತಮ್ಮ ಪರಮಾಪ್ತ ವೆಂಕಟೇಶ್ರ ಗೆಲುವಿಗಾಗಿ ಕಾಂಗ್ರೆಸ್ನ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ಬಿಜೆಪಿಯ ಹಾಲಿ ಸಂಸದ ಎಸ್.ಮುನಿಸ್ವಾಮಿ, ಜೆಡಿಎಸ್ನ ಮಾಜಿ ಶಾಸಕ ಕೆ.ಎಸ್.ಮಂಜುನಾಥ್ಗೌಡ ಸೇರಿದಂತೆ ಮೂರೂ ಪಕ್ಷಗಳ ಮುಖಂಡರ ಬೆಂಬಲ ಪಡೆದು ರೂಪಿಸಿದ ಹೊಂದಾಣಿಕೆ ರಾಜಕೀಯದ ತಂತ್ರಗಾರಿಕೆ ಫಲ ಕೊಟ್ಟಿತು.