‘ಹಣಗಳಿಸಲು ರಾಜಕೀಯಕ್ಕೆ ಬಂದಿಲ್ಲ. ಸಮಾಜ, ಸಮುದಾಯ, ಕೆಳ ವರ್ಗದವರ ಅಭಿವೃದ್ಧಿಗಾಗಿ ಬಂದಿರುವೆ. ರಾಜ್ಯದಲ್ಲಿ ಹಾಲುಮತ ಸಮಾಜ 50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಸಮಾಜದ ಎಸ್ಟಿ ಮೀಸಲಾತಿ ಬಗ್ಗೆ ಈಗಾಗಲೇ ಹಲವು ಬಾರಿ ಸಭೆಗಳು ನಡೆದಿದ್ದು, ಸಕರಾತ್ಮಕ ನಿರ್ಣಯ ಹೊರಬರಲಿದೆ. ಹಾಲುಮತ ಸಮುದಾಯಕ್ಕೆ ರಾಜರ, ಪಾಳೆಗಾರರ, ಬ್ರಿಟಿಷರ ಆಳ್ವಿಕೆ ಯಿಂದಲೂ ಇತಿಹಾಸವಿದ್ದು, ದೇಶದ ಸ್ವಾತಂತ್ರ್ಯಕ್ಕಾಗಿ, ಅಭಿವೃದ್ಧಿಗೆ ಹಲವರು ಜೀವಬಲಿ ಕೊಟ್ಟಿದ್ದಾರೆ’ ಎಂದರು.