ಬೆಳ್ಳಂಬೆಳಿಗ್ಗೆ ಶುರುವಾದ ದಾಳಿ ಸಂಜೆ ತನಕ ನಡೆಯಿತು. ಅಧಿಕಾರಿಗಳು ದಾಖಲೆ ಪರಿಶೀಲಿಸಿದ್ದು, ಪರಿಶೀಲನೆ ಮುಂದುವರಿಸಿದ್ದಾರೆ. ದಾಳಿ ವೇಳೆ ಮುದುಗಲ್ನಲ್ಲಿ ಎರಡು ನಿವೇಶನ, ಕೊಪ್ಪಳ ಜಿಲ್ಲೆಯ ವಿವಿಧೆಡೆ 79 ಎಕರೆ 23 ಗುಂಟೆ ಕೃಷಿ ಜಮೀನು, 1 ಕೆ.ಜಿ.36 ಗ್ರಾಂ ಚಿನ್ನಾಭರಣ, 1 ಕೆ.ಜಿ. 90 ಗ್ರಾಂ ಬೆಳ್ಳಿ ಆಭರಣ, 1 ಟ್ರ್ಯಾಕ್ಟರ್ ಹಾಗೂ ₹13.96 ಲಕ್ಷ ನಗದು ಪತ್ತೆಯಾಗಿದೆ. ಬಳ್ಳಾರಿ ವಲಯದ ಎಸಿಬಿ ಪೊಲೀಸ್ ಅಧೀಕ್ಷಕ ಬಿ.ಎಲ್. ಹರಿಬಾಬು ನೇತೃತ್ವದ ತಂಡ ಈ ದಾಳಿ ನಡೆಸಿದೆ.