ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತಿ ಎಂದು?

Last Updated 15 ಮೇ 2018, 19:30 IST
ಅಕ್ಷರ ಗಾತ್ರ

‘ಮೈಶುಗರ್’ ಕಾರ್ಖಾನೆ ಮಂಡ್ಯ ಜಿಲ್ಲೆಯ ಜೀವನಾಡಿಯಂತಿತ್ತು. ಅದನ್ನು ನಂಬಿ ಜೀವನ ನಡೆಸುತ್ತಿದ್ದವರಿಗೆ ಕಾರ್ಖಾನೆಯು ಅನ್ನ ನೀಡುವುದನ್ನು ಬಿಟ್ಟು ಹಲವು ವರ್ಷಗಳೇ ಕಳೆದಿವೆ. ರೈತರ ಉದ್ಧಾರ, ಏಳಿಗೆ, ಮತ್ತೊಂದು– ಮಗದೊಂದು ಎಂದು ರೈತರ ಹೆಸರಿನಲ್ಲಿ ರಾಜಕೀಯ ಮಾಡಿ ಅಧಿಕಾರ ಗಳಿಸಿದ ಪಕ್ಷಗಳೆಷ್ಟೋ ನಾ ತಿಳಿಯೆ. ಆದರೆ ಯಾವ ಪಕ್ಷವೂ ಆ ಕಡೆ ಗಮನ ಹರಿಸದಿದ್ದುದು ದುರಂತವೇ ಸರಿ. ನಮ್ಮ ರೈತರ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ. ಸಾಲ ಮನ್ನಾ ಎಂಬ ಯೋಜನೆಯಿಂದ ರೈತರಿಗೆ ಯಾವ ರೀತಿಯಲ್ಲೂ ಶಾಶ್ವತ ಪರಿಹಾರ ದೊರಕದು.

ಮಂಡ್ಯ ಕ್ಷೇತ್ರದಿಂದ ಆರಿಸಿ ಬಂದ ಶಾಸಕರು ಇನ್ನಾದರೂ ಈ ಕಾರ್ಖಾನೆಯ ಕಡೆಗೆ ಗಮನ ಹರಿಸಬೇಕು. ಇದು ಈ ಕ್ಷೇತ್ರದ ಮತದಾರನ ಆಜ್ಞೆಯೂ ಹೌದು.

ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT