ಕಡಿಮೆ ಕೂಲಿಗೆ ಒಡಿಶಾದಿಂದ ಕಾರ್ಮಿಕರನ್ನು ಕರೆ ತಂದು ಅವರಿಂದ ಹಗಲು-ರಾತ್ರಿ ದುಡಿಸಿಕೊಳ್ಳಲಾಗುತಿತ್ತು. ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಗುತಿತ್ತು ಎನ್ನಲಾಗಿದೆ.ಇಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ತಪ್ಪಿಸಿಕೊಂಡು ಒಡಿಶಾಗೆ ತೆರಳಿ ಅಲ್ಲಿಯ ಮಾನವಹಕ್ಕು ಆಯೋಗಕ್ಕೆ ದೂರು ನೀಡಿದ್ದರು. ಈ ಕುರಿತು ಅಲ್ಲಿನ 'ಇಂಟರ್ ನ್ಯಾಷನಲ್ ಜಸ್ಟಿಸ್' ಸಂಘಟನೆ ಸದಸ್ಯರು ಇಲ್ಲಿನ ಜಿಲ್ಲಾಡಳಿಕ್ಕೆ ಮಾಹಿತಿ ನೀಡಿದರು. ಅದನ್ನು ಆಧರಿಸಿ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿತು.