‘ಕರಡಿಗೆ ವಯಸ್ಸಾಗಿದ್ದು, ಸಾಕಷ್ಟು ಓಡಾಡಿದ್ದರಿಂದ ನಿತ್ರಾಣಗೊಂಡಿತ್ತು.ಚಾಮಲಾಪುರ, ಇರಕಲ್ಗಡ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಓಡಾಡಿತ್ತು. ಗ್ರಾಮಸ್ಥರ ನೆರವಿನೊಂದಿಗೆ ನಮ್ಮ ಸಿಬ್ಬಂದಿ ಸೆರೆ ಹಿಡಿದರು. ಕಬ್ಬು, ಕಲ್ಲಂಗಡಿ, ಸಪೋಟಾದ ಬೆಳೆಗಳ ನಡುವೆ ಓಡಾಡಿತ್ತು’ ಎಂದು ಆರ್ಎಫ್ಒ ಕೆ.ಎಂ. ನಾಗರಾಜ ತಿಳಿಸಿದರು. ಕಾರ್ಯಾಚರಣೆಯಲ್ಲಿ ಡಿಸಿಎಫ್ ಹರ್ಷಕುಮಾರ ಚಿಕ್ಕನರಗುಂದ, ಎಸಿಎಫ್ ಮಾರ್ಕಂಡೇಯ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.