ಸೋಮವಾರ ಕ್ಷೌರ ಮಾಡುವುದಕ್ಕೆ ಸಂಬಂಧಿಸಿದಂತೆ ನಡೆದ ಜಗಳವು ತೀವ್ರ ಸ್ಪರೂಪ ಪಡೆದು ಪರಸ್ಪರ ಹಲ್ಲೆ ಮಾಡುವ ಮಟ್ಟಕ್ಕೆ ನಡೆದಿದೆ. ಈ ಬಗ್ಗೆ ಯಲಬುರ್ಗಾ ಠಾಣೆಯಲ್ಲಿ ದೇವಪ್ಪ ಭೀಮವ್ವ ಹರಿಜನ ಎಂಬುವರು ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಪಿಎಸ್ಐ ಶಿವಕುಮಾರ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.