ಕೊಪ್ಪಳ: ರಾಜ್ಯದ ’ಅಜ್ಜನ ಜಾತ್ರೆ’ ಎಂದೇ ಖ್ಯಾತಿಯಾದ ಇಲ್ಲಿನ ಗವಿಸಿದ್ಧೇಶ್ವರ ಮಠದಲ್ಲಿ ರಥೋತ್ಸವದ ‘ಮಹಾಸಂಭ್ರಮ’ಕ್ಕೆ ವೇದಿಕೆ ಸಜ್ಜುಗೊಂಡಿದೆ. ಕೋವಿಡ್ ಕಾರಣದಿಂದಾಗಿ ಹಿಂದಿನ ಮೂರು ವರ್ಷ ದೊಡ್ಡ ಪ್ರಮಾಣದಲ್ಲಿ ಮಹಾರಥೋತ್ಸವ ನಡೆದಿರಲಿಲ್ಲ. ಆದರೆ, ಈ ಬಾರಿ ಹಿಂದಿನ ಎಲ್ಲ ಜಾತ್ರೆಗಳ ವೈಭವವನ್ನು ಮೀರಿ ಜನ ಸೇರುವ ನಿರೀಕ್ಷೆಯಿದೆ.