<p>ಗಂಗಾವತಿ: ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಶನಿವಾರ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ, ದೇವರ ದರ್ಶನ ಪಡೆದರು.</p>.<p>ವಾತಾವರಣ ತುಸು ತಂಪಿದ್ದ ಕಾರಣ ಬೆಳಿಗ್ಗೆ 6 ಗಂಟೆಯಿಂದಲೇ ಭಕ್ತರು 575 ಮೆಟ್ಟಿಲು ಹತ್ತಿದರು. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬಂದ ಕಾರಣ ಜನದಟ್ಟಣೆ ಇತ್ತು. ಭಕ್ತರು ಬೆಟ್ಟ ಏರುತ್ತಿರುವಾಗಲೇ ಸಮಯ 10 ಗಂಟೆ ದಾಟಿತು. ದೇವಸ್ಥಾನದ ಸಿಬ್ಬಂದಿ ಬೆಟ್ಟದ ಪ್ರವೇಶದ ದಾರಿ ಬಂದ್ ಮಾಡಿ, ಭಕ್ತರಿಗೆ ಜಿಲ್ಲಾಡಳಿತದ ಆದೇಶದ ಬಗ್ಗೆ ಮನವರಿಕೆ ಮಾಡಿದರು. ಭಕ್ತರು ಸಹ ಸಿಬ್ಬಂದಿಗೆ ಸಹಕಾರ ನೀಡಿದರು.</p>.<p>ಝಳಕ್ಕೆ ತತ್ತರಿಸಿದ ಭಕ್ತರು: ಶನಿವಾರ ಬೆಳಿಗ್ಗೆ ವಾತಾವರಣ ತುಂಬಾ ತಂಪಾಗಿತ್ತು. ಕ್ರಮೇಣ ಬದಲಾಯಿತು. ಬೆಟ್ಟದಲ್ಲಿ ಝಳ ಹೆಚ್ಚಾದ ಕಾರಣ ಬೆಟ್ಟವೇರಿದ ಜನರು ಸಾಲಿನಲ್ಲಿ ಬಸವಳಿದು, ಕೆಲ ಹೊತ್ತು ತೊಂದರೆ ಅನುಭವಿಸಿದರು. ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿದ್ದರೂ, ನೀರಿನ ಲೋಟಗಳಿರಲಿಲ್ಲ. ಇದಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.</p>.<p>ಅಸಮರ್ಪಕ ಪ್ರಸಾದದ ವ್ಯವಸ್ಥೆ: ದರ್ಶನಕ್ಕೆ ಬರುವ ಭಕ್ತರಿಗೆ ಬೆಟ್ಟದ ಮೇಲೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅದು ಕೆಲವರಿಗೆ ಮಾತ್ರ ದೊರೆಯಿತು. ರೈಸ್ಬಾತ್ ದೂರದ ಊರುಗಳಿಂದ ಬಂದಿದ್ದ ಭಕ್ತರಿಗೆ ಸಿಗಲೇ ಇಲ್ಲ. ‘ಪ್ರಸಾದದ ವ್ಯವಸ್ಥೆ ಕಲ್ಪಿಸಿದರೇ ಎಲ್ಲರಿಗೆ ದೊರೆಯುವಂತೆ ಮಾಡಬೇಕು. ಇಲ್ಲದಿದ್ದರೆ ಮಾಡಬಾರದು. ಮಕ್ಕಳು ಪ್ರಸಾದವಿಲ್ಲದೆ, ಹಸಿವಿನಿಂದ ಬಳಲುವಂತಾಗಿದೆ ಎಂದು ವಿಜಯಪುರ ಜಿಲ್ಲೆಯ ಭಕ್ತೆ ವಿಜಯಲತಾ ಸಿಡಿಮಿಡಿಗೊಂಡರು.</p>.<p>ಜಿಡ್ಡುಗಟ್ಟಿದ ತಟ್ಟೆಯಲ್ಲೇ ಪ್ರಸಾದ ಸೇವನೆ: ಭಕ್ತರು ಪ್ರಸಾದ ಸೇವಿಸಿದ ನಂತರ ತಟ್ಟೆಗಳನ್ನು ತೊಳೆಯಲು ಸೋಪಿನ ವ್ಯ ವಸ್ಥೆಯೇ ಇದ್ದಿಲ್ಲ. ಭಕ್ತರು ಅನಿವಾರ್ಯವಾಗಿ ಎಣ್ಣೆ ಜಿಡ್ಡಿನ ತಟ್ಟೆಗಳಲ್ಲಿಯೇ ಪ್ರಸಾದ ಸವಿದರು. ಅಂಜನಾದ್ರಿಗೆ ಭಕ್ತರಿಂದ ಸಾಕಷ್ಟು ಕಾಣಿಕೆ ಬರುತ್ತದೆ. ತಟ್ಟೆ ತೊಳೆಯಲು ಸೋಪಿನ ವ್ಯವಸ್ಥೆ ಕಲ್ಪಿಸಲು ಆಗುವುದಿಲ್ಲವೇ? ಎಂದು ಭಕ್ತರು ದೇವಸ್ಥಾನದ ಸಿಬ್ಬಂದಿ ವಿರುದ್ಧ ಅಸಮಾಧಾನ ಹೊರಹಾಕಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-35-1452722367</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಂಗಾವತಿ: ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಶನಿವಾರ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ, ದೇವರ ದರ್ಶನ ಪಡೆದರು.</p>.<p>ವಾತಾವರಣ ತುಸು ತಂಪಿದ್ದ ಕಾರಣ ಬೆಳಿಗ್ಗೆ 6 ಗಂಟೆಯಿಂದಲೇ ಭಕ್ತರು 575 ಮೆಟ್ಟಿಲು ಹತ್ತಿದರು. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬಂದ ಕಾರಣ ಜನದಟ್ಟಣೆ ಇತ್ತು. ಭಕ್ತರು ಬೆಟ್ಟ ಏರುತ್ತಿರುವಾಗಲೇ ಸಮಯ 10 ಗಂಟೆ ದಾಟಿತು. ದೇವಸ್ಥಾನದ ಸಿಬ್ಬಂದಿ ಬೆಟ್ಟದ ಪ್ರವೇಶದ ದಾರಿ ಬಂದ್ ಮಾಡಿ, ಭಕ್ತರಿಗೆ ಜಿಲ್ಲಾಡಳಿತದ ಆದೇಶದ ಬಗ್ಗೆ ಮನವರಿಕೆ ಮಾಡಿದರು. ಭಕ್ತರು ಸಹ ಸಿಬ್ಬಂದಿಗೆ ಸಹಕಾರ ನೀಡಿದರು.</p>.<p>ಝಳಕ್ಕೆ ತತ್ತರಿಸಿದ ಭಕ್ತರು: ಶನಿವಾರ ಬೆಳಿಗ್ಗೆ ವಾತಾವರಣ ತುಂಬಾ ತಂಪಾಗಿತ್ತು. ಕ್ರಮೇಣ ಬದಲಾಯಿತು. ಬೆಟ್ಟದಲ್ಲಿ ಝಳ ಹೆಚ್ಚಾದ ಕಾರಣ ಬೆಟ್ಟವೇರಿದ ಜನರು ಸಾಲಿನಲ್ಲಿ ಬಸವಳಿದು, ಕೆಲ ಹೊತ್ತು ತೊಂದರೆ ಅನುಭವಿಸಿದರು. ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿದ್ದರೂ, ನೀರಿನ ಲೋಟಗಳಿರಲಿಲ್ಲ. ಇದಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.</p>.<p>ಅಸಮರ್ಪಕ ಪ್ರಸಾದದ ವ್ಯವಸ್ಥೆ: ದರ್ಶನಕ್ಕೆ ಬರುವ ಭಕ್ತರಿಗೆ ಬೆಟ್ಟದ ಮೇಲೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅದು ಕೆಲವರಿಗೆ ಮಾತ್ರ ದೊರೆಯಿತು. ರೈಸ್ಬಾತ್ ದೂರದ ಊರುಗಳಿಂದ ಬಂದಿದ್ದ ಭಕ್ತರಿಗೆ ಸಿಗಲೇ ಇಲ್ಲ. ‘ಪ್ರಸಾದದ ವ್ಯವಸ್ಥೆ ಕಲ್ಪಿಸಿದರೇ ಎಲ್ಲರಿಗೆ ದೊರೆಯುವಂತೆ ಮಾಡಬೇಕು. ಇಲ್ಲದಿದ್ದರೆ ಮಾಡಬಾರದು. ಮಕ್ಕಳು ಪ್ರಸಾದವಿಲ್ಲದೆ, ಹಸಿವಿನಿಂದ ಬಳಲುವಂತಾಗಿದೆ ಎಂದು ವಿಜಯಪುರ ಜಿಲ್ಲೆಯ ಭಕ್ತೆ ವಿಜಯಲತಾ ಸಿಡಿಮಿಡಿಗೊಂಡರು.</p>.<p>ಜಿಡ್ಡುಗಟ್ಟಿದ ತಟ್ಟೆಯಲ್ಲೇ ಪ್ರಸಾದ ಸೇವನೆ: ಭಕ್ತರು ಪ್ರಸಾದ ಸೇವಿಸಿದ ನಂತರ ತಟ್ಟೆಗಳನ್ನು ತೊಳೆಯಲು ಸೋಪಿನ ವ್ಯ ವಸ್ಥೆಯೇ ಇದ್ದಿಲ್ಲ. ಭಕ್ತರು ಅನಿವಾರ್ಯವಾಗಿ ಎಣ್ಣೆ ಜಿಡ್ಡಿನ ತಟ್ಟೆಗಳಲ್ಲಿಯೇ ಪ್ರಸಾದ ಸವಿದರು. ಅಂಜನಾದ್ರಿಗೆ ಭಕ್ತರಿಂದ ಸಾಕಷ್ಟು ಕಾಣಿಕೆ ಬರುತ್ತದೆ. ತಟ್ಟೆ ತೊಳೆಯಲು ಸೋಪಿನ ವ್ಯವಸ್ಥೆ ಕಲ್ಪಿಸಲು ಆಗುವುದಿಲ್ಲವೇ? ಎಂದು ಭಕ್ತರು ದೇವಸ್ಥಾನದ ಸಿಬ್ಬಂದಿ ವಿರುದ್ಧ ಅಸಮಾಧಾನ ಹೊರಹಾಕಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-35-1452722367</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>