<p><strong>ಕೊಪ್ಪಳ/ಗಂಗಾವತಿ:</strong> ಅಂಜನಾದ್ರಿ ದೇವಸ್ಥಾನಕ್ಕೆ ಹೈದರಾಬಾದ್ನ ದಾನಿ ಎಎಂಆರ್ ಪ್ರವೈಟ್ ಲಿಮಿಟೆಡ್ನ ಎ. ಮಹೇಶ ರೆಡ್ಡಿ ಅವರು ದೇಣಿಗೆಯಾಗಿ ನೀಡಿದ ಎಲ್ಲ ಕವಚಗಳಿಗೆ ಉಪಯೋಗಿಸಿದ ಲೋಹಗಳಿಗೆ ಸಂಬಂಧಿಸಿದ ಬಿಲ್ ಹಾಗೂ ಇತರೆ ದಾಖಲೆಗಳನ್ನು ಪುನರ್ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ತಿಳಿಸಿದ್ದಾರೆ.</p><p>ಮೇ 8ರಂದು ₹2.5 ಕೋಟಿ ಮೌಲ್ಯದ ಬಂಗಾರದ ಆಭರಣಗಳು ಎಂದು ಹೇಳಿ ದಾನ ಮಾಡಲಾಗಿತ್ತು. ಆಂಜನೇಯನ ಪಾದಗಟ್ಟೆ ಬಳಿ ಚಿನ್ನ ಲೇಪಿತ ಪ್ರಭಾವಳಿ, ಛತ್ರಿ, ಕಿರೀಟ, ಗದೆ ನೀಡಿದ್ದರು. ಆಂಜನೇಯನಿಗೆ ನೀಡಿದ ಆಭರಣದಲ್ಲಿ ಉದ್ಯಮಿ ಮಹೇಶ ಹಾಗೂ ಶಾಸಕ ಜನಾರ್ದನ ರೆಡ್ಡಿ ಹೇಳಿದಷ್ಟು ಆಭರಣದ ಮೌಲ್ಯ ಇಲ್ಲವೆನ್ನುವುದು ಸಾರ್ವಜನಿಕವಾಗಿ ಚರ್ಚೆಗೆ ಕಾರಣವಾಗಿದೆ.</p><p>ಆದ್ದರಿಂದ ಹೇಳಿಕೆ ನೀಡಿರುವ ಜಿಲ್ಲಾಧಿಕಾರಿ ‘ದಾನಿಗಳು ಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಕಾಣಿಕೆಗಳನ್ನು ದೇವಸ್ಥಾನ ಸಮಿತಿಯ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ಮೇ 10ರಂದು ಅಕ್ಕಸಾಲಿಗರು, ಬ್ಯಾಂಕ್ ಆಭರಣ ಮೌಲ್ಯಮಾಪಕರ ಸಮಕ್ಷಮದಲ್ಲಿ ಪಂಚನಾಮೆ ನಡೆಸಲಾಗಿದೆ. ದೇಣಿಗೆ ರೂಪದಲ್ಲಿ ನೀಡಲಾದ ಲೋಹಗಳ ವಿವರ ನೀಡಿದ್ದು ಈ ಕವಚಗಳನ್ನು ತಾಮ್ರದಿಂದ ತಯಾರಿಸಲಾಗಿದ್ದು, ಇವುಗಳಿಗೆ ಬಂಗಾರದ ಲೇಪನಕ್ಕಾಗಿ 60 ಗೇಜ್ ಉಳ್ಳ ಬಂಗಾರದ ಹಾಳೆಗಳನ್ನು ಬಳಕೆ ಮಾಡಲಾಗಿದೆ ಈ ಬಂಗಾರದ ಅಂದಾಜು ತೂಕ 1280 ಗ್ರಾಂ ಇರುವುದಾಗಿ ದಾನಿಗಳ ಪರವಾಗಿ ಹಾಜರಿದ್ದ ಗುಂಡಾಚಾರಿ ಸ್ಥಪತಿ ಹೇಳಿದ್ದಾರೆ’ ಎಂದಿದ್ದಾರೆ.</p><p>‘ಈ ಸಂಬಂಧ ಸರ್ಕಾರದ ಪರವಾಗಿ ಹಾಜರಿದ್ದ ಅಕ್ಕ ಸಾಲಿಗರು ಕವಚ ಪರಿಶೀಲನೆ ಮಾಡಿ ತಾಮ್ರದ ಕವಚಗಳಿಗೆ ಲೇಪನ ಮಾಡಿದ ಬಂಗಾರ ತೂಕವು ಅಂದಾಜು 250 ಗ್ರಾಂದಿಂದ 300 ಗ್ರಾಂ ಮಾತ್ರ ಇರುವುದಾಗಿ ತಿಳಿಸಿದ್ದಾರೆ. ನಿಖರ ಮಾಹಿತಿ ಅಗತ್ಯವಿರುವ ಕಾರಣ ಎಲ್ಲ ಕವಚಗಳಿಗೆ ಉಪಯೋಗಿಸಲಾದ ಲೋಹಗಳ ವಿವರವನ್ನು ಮಾಲ್ಯದ ಮಾಹಿತಿಯೊಂದಿಗೆ ಹಾಜರಾಗುವಂತೆ ಗುಂಡಾಚಾರಿ ಅವರಿಗೆ ಸೂಚಿಸಲಾಗಿತ್ತು. ಅವುಗಳನ್ನು ಪುನರ್ ಪರಿಶೀಲನೆ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.</p><p><strong>ಷಡ್ಯಂತ್ರದಿಂದ ಅಪಪ್ರಚಾರ: ರೆಡ್ಡಿ</strong></p><p>ಅಂಜನಾದ್ರಿಗೆ ಮಹೇಶ ರೆಡ್ಡಿ ಕುಟುಂಬದವರು 1440 ಗ್ರಾಂನಷ್ಟು ಚಿನ್ನ ದಾನ ನೀಡಿದ್ದಾರೆ. ವಿನಾಕಾರಣ ಅವರ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ.</p><p>ದೇವಸ್ಥಾನಗಳಿಗೆ ನೀಡುವ ಆಭರಣದ ಕಾಣಿಕೆಯಲ್ಲಿ ಕೇವಲ ಚಿನ್ನವಷ್ಟೇ ಇರುವುದಿಲ್ಲ. ಲೋಹವನ್ನೂ ಬಳಸಿಕೊಂಡು ಆಭರಣ ತಯಾರಿಸಲಾಗಿರುತ್ತದೆ. ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಲು ಹೀಗೆ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾನೂ ಬಹಿರಂಗ ಮಾಡುತ್ತೇನೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ/ಗಂಗಾವತಿ:</strong> ಅಂಜನಾದ್ರಿ ದೇವಸ್ಥಾನಕ್ಕೆ ಹೈದರಾಬಾದ್ನ ದಾನಿ ಎಎಂಆರ್ ಪ್ರವೈಟ್ ಲಿಮಿಟೆಡ್ನ ಎ. ಮಹೇಶ ರೆಡ್ಡಿ ಅವರು ದೇಣಿಗೆಯಾಗಿ ನೀಡಿದ ಎಲ್ಲ ಕವಚಗಳಿಗೆ ಉಪಯೋಗಿಸಿದ ಲೋಹಗಳಿಗೆ ಸಂಬಂಧಿಸಿದ ಬಿಲ್ ಹಾಗೂ ಇತರೆ ದಾಖಲೆಗಳನ್ನು ಪುನರ್ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ತಿಳಿಸಿದ್ದಾರೆ.</p><p>ಮೇ 8ರಂದು ₹2.5 ಕೋಟಿ ಮೌಲ್ಯದ ಬಂಗಾರದ ಆಭರಣಗಳು ಎಂದು ಹೇಳಿ ದಾನ ಮಾಡಲಾಗಿತ್ತು. ಆಂಜನೇಯನ ಪಾದಗಟ್ಟೆ ಬಳಿ ಚಿನ್ನ ಲೇಪಿತ ಪ್ರಭಾವಳಿ, ಛತ್ರಿ, ಕಿರೀಟ, ಗದೆ ನೀಡಿದ್ದರು. ಆಂಜನೇಯನಿಗೆ ನೀಡಿದ ಆಭರಣದಲ್ಲಿ ಉದ್ಯಮಿ ಮಹೇಶ ಹಾಗೂ ಶಾಸಕ ಜನಾರ್ದನ ರೆಡ್ಡಿ ಹೇಳಿದಷ್ಟು ಆಭರಣದ ಮೌಲ್ಯ ಇಲ್ಲವೆನ್ನುವುದು ಸಾರ್ವಜನಿಕವಾಗಿ ಚರ್ಚೆಗೆ ಕಾರಣವಾಗಿದೆ.</p><p>ಆದ್ದರಿಂದ ಹೇಳಿಕೆ ನೀಡಿರುವ ಜಿಲ್ಲಾಧಿಕಾರಿ ‘ದಾನಿಗಳು ಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಕಾಣಿಕೆಗಳನ್ನು ದೇವಸ್ಥಾನ ಸಮಿತಿಯ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ಮೇ 10ರಂದು ಅಕ್ಕಸಾಲಿಗರು, ಬ್ಯಾಂಕ್ ಆಭರಣ ಮೌಲ್ಯಮಾಪಕರ ಸಮಕ್ಷಮದಲ್ಲಿ ಪಂಚನಾಮೆ ನಡೆಸಲಾಗಿದೆ. ದೇಣಿಗೆ ರೂಪದಲ್ಲಿ ನೀಡಲಾದ ಲೋಹಗಳ ವಿವರ ನೀಡಿದ್ದು ಈ ಕವಚಗಳನ್ನು ತಾಮ್ರದಿಂದ ತಯಾರಿಸಲಾಗಿದ್ದು, ಇವುಗಳಿಗೆ ಬಂಗಾರದ ಲೇಪನಕ್ಕಾಗಿ 60 ಗೇಜ್ ಉಳ್ಳ ಬಂಗಾರದ ಹಾಳೆಗಳನ್ನು ಬಳಕೆ ಮಾಡಲಾಗಿದೆ ಈ ಬಂಗಾರದ ಅಂದಾಜು ತೂಕ 1280 ಗ್ರಾಂ ಇರುವುದಾಗಿ ದಾನಿಗಳ ಪರವಾಗಿ ಹಾಜರಿದ್ದ ಗುಂಡಾಚಾರಿ ಸ್ಥಪತಿ ಹೇಳಿದ್ದಾರೆ’ ಎಂದಿದ್ದಾರೆ.</p><p>‘ಈ ಸಂಬಂಧ ಸರ್ಕಾರದ ಪರವಾಗಿ ಹಾಜರಿದ್ದ ಅಕ್ಕ ಸಾಲಿಗರು ಕವಚ ಪರಿಶೀಲನೆ ಮಾಡಿ ತಾಮ್ರದ ಕವಚಗಳಿಗೆ ಲೇಪನ ಮಾಡಿದ ಬಂಗಾರ ತೂಕವು ಅಂದಾಜು 250 ಗ್ರಾಂದಿಂದ 300 ಗ್ರಾಂ ಮಾತ್ರ ಇರುವುದಾಗಿ ತಿಳಿಸಿದ್ದಾರೆ. ನಿಖರ ಮಾಹಿತಿ ಅಗತ್ಯವಿರುವ ಕಾರಣ ಎಲ್ಲ ಕವಚಗಳಿಗೆ ಉಪಯೋಗಿಸಲಾದ ಲೋಹಗಳ ವಿವರವನ್ನು ಮಾಲ್ಯದ ಮಾಹಿತಿಯೊಂದಿಗೆ ಹಾಜರಾಗುವಂತೆ ಗುಂಡಾಚಾರಿ ಅವರಿಗೆ ಸೂಚಿಸಲಾಗಿತ್ತು. ಅವುಗಳನ್ನು ಪುನರ್ ಪರಿಶೀಲನೆ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.</p><p><strong>ಷಡ್ಯಂತ್ರದಿಂದ ಅಪಪ್ರಚಾರ: ರೆಡ್ಡಿ</strong></p><p>ಅಂಜನಾದ್ರಿಗೆ ಮಹೇಶ ರೆಡ್ಡಿ ಕುಟುಂಬದವರು 1440 ಗ್ರಾಂನಷ್ಟು ಚಿನ್ನ ದಾನ ನೀಡಿದ್ದಾರೆ. ವಿನಾಕಾರಣ ಅವರ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ.</p><p>ದೇವಸ್ಥಾನಗಳಿಗೆ ನೀಡುವ ಆಭರಣದ ಕಾಣಿಕೆಯಲ್ಲಿ ಕೇವಲ ಚಿನ್ನವಷ್ಟೇ ಇರುವುದಿಲ್ಲ. ಲೋಹವನ್ನೂ ಬಳಸಿಕೊಂಡು ಆಭರಣ ತಯಾರಿಸಲಾಗಿರುತ್ತದೆ. ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಲು ಹೀಗೆ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾನೂ ಬಹಿರಂಗ ಮಾಡುತ್ತೇನೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>