ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,‘ಪ್ರತಿ ಕ್ವಿಂಟಲ್ಗೆ ಮೆಕ್ಕೆಜೋಳವನ್ನು ₹2,100 ಮತ್ತು ಸಜ್ಜೆಯನ್ನು ₹1,850 ಬೆಂಬಲ ಬೆಲೆಯಲ್ಲಿ ಖರೀದಿಸುವುದಾಗಿ ರಾಜ್ಯ ಸರ್ಕಾರ ಪ್ರಚಾರ ಮಾಡಿತ್ತು. ಆದರೆ ವಾಸ್ತವದಲ್ಲಿ ಈ ಎರಡೂ ಕೃಷಿ ಹುಟ್ಟುವಳಿಗಳ ದರ ಸದ್ಯ ಇಳಿಮುಖವಾಗಿದೆ. ಬೆಳೆ ಬೆಳೆಯುವುದಕ್ಕೆ ಮಾಡಿದ ಖರ್ಚು ಕೂಡ ರೈತರಿಗೆ ಮರಳಿ ಬಾರದಂತಾಗಿದೆ.