ರಜೆ ಇದ್ದರೂ ಕಚೇರಿಗೆ ಬಂದ ಕ್ಷೇತ್ರ ಸುರೇಂದ್ರ ಕಾಂಬಳೆ ಅವರು ಶೌಚಾಲಯ, ಮೂತ್ರಾಲಯ ಶುಚಿಗೊಳಿಸಿತೊಡಗಿದರು. ಅಲ್ಲಿಗೆ ಬಂದ ಸಿಬ್ಬಂದಿ ದಾವಲಸಾಬ ವಾಲೀಕಾರ, ಶರಣಪ್ಪ ತೆಮ್ಮಿನಾಳ ಅವರೂ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದರು. ಅಲ್ಲಿನ ಕಸ ಕಡ್ಡಿ ತೆಗೆದಿದ್ದು ಅಲ್ಲದೇ ಸಾರ್ವಜನಿಕರು ಉಗುಳಿದ್ದ ಕೆಂಪು ಕಲೆ, ಹೊಲಸನ್ನು ಪಿನಾಯಿಲ್ ಹಾಕಿ ನೀರಿನಿಂದ ಸ್ವಚ್ಛಗೊಳಿಸಿದರು.