‘ಮಾಯಸಂದ್ರ ಹೋಬಳಿ ಮಾವಿನಕೆರೆ ಗ್ರಾಮದಲ್ಲಿ 2 ಕಂಬ ಬಿದ್ದಿವೆ. ಗೈನಾಥಪುರದಲ್ಲಿ ಒಂದು ಮರ, ವಿದ್ಯುತ್ ಕಂಬ ನೆಲಕ್ಕುರುಳಿವೆ. ಅದೇ ರೀತಿ ಬಾವಿನಕೆರೆಯ ಕಾಳಿಕಾಂಬ ದೇವಸ್ಥಾನ, ಕೊಟ್ಟೂರು ಕೊಟ್ಟಿಗೆಯ ಆರ್.ಎಂ.ಸಿ ಮುಂಭಾಗ, ಹಿರೇಡೊಂಕಿಹಳ್ಳಿ, ದೊಡ್ಡೇನಹಳ್ಳಿ, ದಬ್ಬೇಘಟ್ಟದಲ್ಲಿ ಮರದ ಕೊಂಬೆಗಳು ವಿದ್ಯುತ್ ತಂತಿ ಮೇಲೆ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಬೆಸ್ಕಾಂ ಇಲಾಖೆಯ ಧರಣೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.