ಕುಷ್ಟಗಿ: ರಾಹುಲ್ ಗಾಂಧಿ ಎಲ್ಲೆಲ್ಲಿ ಕಾಲಿಡುತ್ತಾರೊ ಅಲ್ಲಿ ಕಾಂಗ್ರೆಸ್ ಪಕ್ಷ ಮಟಾಶ್ ಆಗುತ್ತದೆ ಎಂದು ಸಚಿವ ಬಿ. ಶ್ರೀರಾಮುಲು ಟೀಕಿಸಿದರು.
ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ ಭಾರತ್ ಜೋಡೊ ಯಾತ್ರೆಗೆ ರಾಹುಲ್ ಗಾಂಧಿ ಬಂದಿದ್ದಾರೆ. ಯಾತ್ರೆಯಲ್ಲಿ ಓಡು ಅಂದರೆ ಓಡಬೇಕು, ನಡಿ ಅಂದರೆ ನಡೆಯಬೇಕು. ಭಾರತ ಅಖಂಡ ದೇಶ. ಭಾರತ್ ಜೋಡೊ ಅಂದ್ರೆ ಎಲ್ಲಿಂದ ಎಲ್ಲಿಗೆ ಜೋಡಿಸುತ್ತೀರಿ ಎಂದು ಪ್ರಶ್ನಿಸಿದರು.