ಕೊಪ್ಪಳ: ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದ ವತಿಯಿಂದ ತಾಲ್ಲೂಕಿನ ಬೂದಗುಂಪಾ ಗ್ರಾಮದಲ್ಲಿ ಶುಕ್ರವಾರ ವಲಯ ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮನಡೆಯಿತು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೊಟಗಾರ ಮಾತನಾಡಿ ‘ಸಿರಿಧಾನ್ಯಗಳ ಬಳಕೆ ಗರ್ಭಿಣಿ ಬಾಣಂತಿಯರಲ್ಲಿ ರಕ್ತಹೀನತೆ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಪೌಷ್ಠಿಕತೆಯನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಸಿರಿಧಾನ್ಯಗಳಲ್ಲಿದ್ದು, ಇವುಗಳ ಮಹತ್ವ ಅಪಾರವಾಗಿದೆ’ ಎಂದರು.
ಕೆ.ಎಚ್.ಪಿ.ಟಿ ಶಾಂತ ಮಾತನಾಡಿ ‘ಮಹಿಳೆಯರು ಬಲಿಷ್ಠರಾಗಲು ಸಿರಿಧಾನ್ಯಗಳು ಬಹುಮುಖ್ಯ ಪಾತ್ರ ವಹಿಸುತ್ತದೆ. ಸದೃಢ ರಾಷ್ಟ್ರದ ನಿರ್ಮಾಣದ ಮೈಲುಗಲ್ಲು ಸಿರಿಧಾನ್ಯ’ ಎಂದು ಅಭಿಪ್ರಾಯ ಪಟ್ಟರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ದ್ರಾಕ್ಷಾಯಿಣೆಮ್ಮ ಪಿ, ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ವಲಯದ ಮೇಲ್ವಿಚಾರಕಿಯರಾದ ಸುಮಂಗಲಾ, ಗಾಯತ್ರಿ, ಕಮಲಾಕ್ಷಿ, ಪೋಷಣ ಸಿಬ್ಬಂದಿ ಚೇಲನಾರಾಣಿ, ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇದ್ದರು.