ಐದಾರು ದಿನಗಳಿಂದ ರಸ್ತೆ ಇಲ್ಲದೆ ಸಂಪರ್ಕ ಬಂದ್ ಆಗಿದೆ. ತಾತ್ಕಾಲಿಕ ರಸ್ತೆಯೂ ಇಲ್ಲ. ಮೇಲ್ಸೇತುವೆ ಕೂಡ ಇಲ್ಲ. ಸ್ಥಳದಲ್ಲಿ ರೈಲ್ವೆ ಇಲಾಖೆ ಎಂಜಿನಿಯರ್ಗಳು ಹಾಗೂ ಗುತ್ತಿಗೆದಾರ ಒಬ್ಬರೂ ಇಲ್ಲದೆ ನಿರ್ಲಕ್ಷ್ಯವಹಿಸಿದ್ದಾರೆ. ಜನರಿಗೆ ತೊಂದರೆಯಾಗುತ್ತದೆ ಎಂಬುದು ತಿಳಿದರೂ ನಿರ್ಲಕ್ಷ್ಯವಹಿಸಿದ್ದಾರೆ. ಈ ಸಮಸ್ಯೆಯನ್ನು ಯಾರ ಮುಂದೆ ಹೇಳಬೇಕೆಂಬುದೇ ತಿಳಿಯುತ್ತಿಲ್ಲ ಎಂದು ಶಾಖಾಪುರ ಗ್ರಾಮಸ್ಥ ಗ್ಯಾನಪ್ಪ ಯರಗೇರಿ, ನೆರೆಬೆಂಚಿಯ ಹನುಮಗೌಡ ಪಾಟೀಲ ಇತರರು ಗೋಳು ತೋಡಿಕೊಂಡರು.