‘ಕಾಮಗಾರಿ ಬಹುತೇಕ ಈಗ ಪೂರ್ಣಗೊಳ್ಳುವ ಹಂತದಲ್ಲಿದ್ದು, ಒಂದು ವರ್ಷದ ಅವಧಿಯಲ್ಲಿ ಶೇ 60ರಷ್ಟು ಹೂಳು ತುಂಬಿಕೊಂಡಿದೆ. ಕರ್ನಾಟಕ ನೀರಾವರಿ ನಿಗಮ ನಿಗದಿಪಡಿಸಿರುವ ವಿನ್ಯಾಸದಂತೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಗುತ್ತಿಗೆ ಪಡೆದ ಕಂಪನಿ ಹೇಳುತ್ತಿದೆ. ಈ ಕಾಲುವೆಗಳು ಭೂಮಿಯ ಮೇಲ್ಮಟ್ಟ ದಿಂದ ಸುಮಾರು 6ರಿಂದ 8 ಅಡಿಗಳ ಕೆಳಭಾಗದಲ್ಲಿ ಹರಿದುಹೋಗುತ್ತವೆ. ಆದರೆ, ಕೇವಲ ನಾಲ್ಕು ಅಡಿಗಳ ಎತ್ತರದಲ್ಲಿ ಕಾಂಕ್ರಿಟ್ ಹಾಕಲಾಗಿದೆ. ಈ ಕಾಲುವೆಗಳ ಎರಡೂ ಕಡೆಯ ಗೋಡೆಗಳು ಮತ್ತು ಕೆಳಭಾಗದಲ್ಲಿ ಸ್ಟೀಲ್ ತಂತಿ ಹಾಕಿಲ್ಲ‘ ಎಂದುಕರ್ನಾಟಕ ರಾಜ್ಯ ಗುತ್ತಿಗೆ ಕಾರ್ಮಿಕರ ಸಲಹಾ ಮಂಡಳಿ ಸದಸ್ಯ ಪಂಪಾಪತಿ ರಾಟಿ ಆರೋಪಿಸಿದ್ದಾರೆ.