ಕೊಪ್ಪಳ: ಭಾರತೀಯ ಸೇನೆಯಲ್ಲಿ 20 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಬಂದ ದೇವೇಂದ್ರಪ್ಪ ಮಂಗಳೂರು ಅವರಿಗೆ ನಗರದಲ್ಲಿ ಶನಿವಾರ ಸಂಭ್ರಮದ ಸ್ವಾಗತ ಲಭಿಸಿತು.
ತೆರೆದ ಜೀಪಿನಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ದೇವೇಂದ್ರಪ್ಪ ಅವರ ಕುಟುಂಬದವರು, ಸ್ನೇಹಿತರು ಸ್ವಾಗತಿಸಿ ಬರಮಾಡಿಕೊಂಡರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ದಾರಿಯುದ್ದಕ್ಕೂ ಜನ ಶುಭ ಕೋರಿದರು. ಹೂ ಮಳೆ ಸುರಿಸಿದರು.