ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಮತ್ತು ನಗರದ ವಿವಿಧ ವಾರ್ಡ್ಗಳಿಂದ ಸಾವಿರಾರು ಭಕ್ತರು ಜಾತ್ರೆಗೆ ಆಗಮಿಸಿದ್ದರು. ಬಹಳಷ್ಟು ಜನರು ಮಾಸ್ಕ್ ಕೂಡ ಧರಿಸಿರಲಿಲ್ಲ. ಜಾತ್ರೆ ಕಾರಣ ನಗರದಲ್ಲಿ ವಾರಾಂತ್ಯದ ಕರ್ಫ್ಯೂ ಅನ್ವಯವಾಗಲಿಲ್ಲ. ಇಲ್ಲಿನ ಕೃಷ್ಣದೇವರಾಯ, ಗಾಂಧಿ, ಮಹಾವೀರ, ಸಿಬಿಎಸ್, ಜುಲೈನಗರ, ಆದಿ ಜಾಂಭವ ವೃತ್ತದಲ್ಲಿ ಸಂಜೆಯವರೆಗೆ ಜನ ಸಂಚಾರ ಎಂದಿನಂತೆ ಇತ್ತು.