ಬಸ್ನಿಲ್ದಾಣದಿಂದ ಎಕ್ಸಿಸ್ ಬ್ಯಾಂಕ್ ಶಾಖೆ ಮುಂದಿನ ರಸ್ತೆಯ ಪಕ್ಕದಲ್ಲಿ ದೊಡ್ಡ ದೊಡ್ಡ ಕುಳಗಳು, ಕಾಂಪ್ಲೆಕ್ಸ್ ಮಾಲೀಕರು ರಸ್ತೆ ಜಾಗವನ್ನು ಕಬಳಿಸಿದ್ದಾರೆ. ಆದರೆ ಪುರಸಭೆ, ಪೊಲೀಸರು ಅಂಥವರ ವಿರುದ್ಧ ಕ್ರಮಕೈಗೊಳ್ಳುವುದಿಲ್ಲ. ದೈನಂದಿನ ಬದುಕಿನ ಹೊಟ್ಟೆ ಹೊರೆಯಲು ದುಡಿದು ಉಣ್ಣುವ ಬಡಪಾಯಿಗಳ ಮೇಲೆ ಬ್ರಹ್ಮಾಸ್ತ್ರ ಬಿಡುತ್ತಿದ್ದಾರೆ ಎಂದು ಅಸಮಾಧಾನ ತೋಡಿಕೊಂಡರು.