ಕಳೆದ ಮೂವತ್ತು ವರ್ಷಗಳಿಂದ ರೈತಪರ ಹೋರಾಟಗಳನ್ನು ಮಾಡುತ್ತಾ, ತ್ರಿವಳಿ ಜಿಲ್ಲೆಗಳಾದ ಬಳ್ಳಾರಿ, ಕೊಪ್ಪಳ, ರಾಯಚೂರು ಭಾಗದ ರೈತರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಗುರುತಿಸಿಕೊಂಡಿದ್ದರು. ಜೊತೆಗೆ ಬಿಜೆಪಿ ಪಕ್ಷದಲ್ಲೂ ಸಕ್ರೀಯವಾಗಿ ತೊಡಗಿದ್ದ ಅವರನ್ನು ಹೈಕಮಾಂಡ್ ಗುರುತಿಸಿ ಕಾಡಾ ಅಧ್ಯಕ್ಷರನ್ನಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇಮಕ ಮಾಡಿದ್ದಾರೆ.
ಆರಂಭದಲ್ಲಿ ಆರ್ ಎಸ್ ಎಸ್ ಮೂಲಕ ಗುರುತಿಸಿಕೊಂಡು ಎಬಿವಿಪಿ ನಾಯಕರಾಗಿ ಬಿಜೆಪಿ ಮೂಲಕ ರಾಜಕೀಯಕ್ಕೆ ಬಂದಿದ್ದರು.