ಆದರೆ ಮಳಿಗೆಗಳಲ್ಲಿರುವವರನ್ನು ಖಾಲಿ ಮಾಡಿಸದೆ ಪುರಸಭೆಯ ಅಧಿಕಾರಿಗಳು ಮತ್ತು ಕೆಲ ಪುರಪಿತೃಗಳು ಅವ್ಯವಹಾರ ನಡೆಸಿದ್ದಾರೆ. ಲಕ್ಷಾಂತರ ಹಣ ಕೈಬದಲಾಗಿದೆ ಎಂದು ಆರೋಪಿಸಿರುವುದಕ್ಕೆ ಅಸಮಾಧಾನ ಹೊರಹಾಕಿದ ಅಧ್ಯಕ್ಷ, ದಶಕಗಳಿಂದಲೂ ಈ ವಿಷಯ ನ್ಯಾಯಾಲಯದಲ್ಲಿತ್ತು. ಹಿಂದೆ ಅಧಿಕಾರ ನಡೆಸಿದ ಅಧಿಕಾರಿಗಳು ಮತ್ತು ಅಧಿಕಾರದಲ್ಲಿದ್ದವರು ಮುತುವರ್ಜಿವಹಿಸಿರಲಿಲ್ಲ. ಆದರೆ ಈ ವಿಷಯದಲ್ಲಿ ತಾವು ವಿಶೇಷ ಆಸಕ್ತಿ ವಹಿಸಿದ್ದರಿಂದ ನ್ಯಾಯಾಲಯದಿಂದ ಪುರಸಭೆ ಪರವಾಗಿ ತೀರ್ಪು ಬಂದಿದೆ ಎಂಬುದನ್ನು ಮನಗಾಣಬೇಕಿದೆ. ಹೀಗಿದ್ದರೂ ಪುರಸಭೆ ವಿರುದ್ಧ ಅಪಪ್ರಚಾರ ನಡೆಸುವವರಲ್ಲಿ ಅರಿವಿನ ಕೊರತೆ ಇದೆ ಎಂದು ತಿರುಗೇಟು ನೀಡಿದರು.