ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13ರಂದು ಕಾಂಗ್ರೆಸ್ ಪಾದಯಾತ್ರೆ:ಶಿವರಾಜ ತಂಗಡಗಿ

Last Updated 7 ಆಗಸ್ಟ್ 2022, 7:55 IST
ಅಕ್ಷರ ಗಾತ್ರ

ಕನಕಗಿರಿ: ದೇಶದ ಸ್ವಾತಂತ್ರ್ಯ ಚಳವಳಿಗೆ ಕಾಂಗ್ರೆಸ್ ನೀಡಿದ ಕೊಡುಗೆ ಅಪಾರವಾಗಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಬಿಜೆಪಿ ಕೊಡುಗೆ ಶೂನ್ಯ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ತಿಳಿಸಿದರು.

ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟಗಾರರ ಜೀವನ, ಕೊಡುಗೆ, ಮಹತ್ವ ಕುರಿತು ಜನ ಸಾಮಾನ್ಯರಿಗೆ ತಿಳಿಸಲು ನವಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹೊಸ ಜೀರಾಳ ಕಲ್ಗುಡಿಯಿಂದ ಆಗಸ್ಟ್‌ 13ರಂದು ಹಳೇ ಕಲ್ಗುಡಿ, ಚಿಕ್ಕಡಂಕನಕಲ್, ಹಿರೇಡಂಕನಕಲ್, ಚಿರ್ಚನಗುಡ್ಡ, ಚಿರ್ಚನಗುಡ್ಡ ತಾಂಡ, ಆದಾಪುರ ಮೂಲಕ ನವಲಿ ವರೆಗೆ ಪಾದಯಾತ್ರೆ ಆಯೋಜಿಸಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕೆಂದು ಅವರು ತಿಳಿಸಿದರು.

ಬ್ಲಾಕ್ ಅಧ್ಯಕ್ಷ ಕೆ.ಗಂಗಾಧರ ಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಅಮರೇಶ ಗೋನಾಳ, ವೀರೇಶ ಸಮಗಂಡಿ, ಪ್ರಮುಖರಾದ ಸಿದ್ದಪ್ಪ ನೀರಲೂಟಿ, ಶರಣಬಸಪ್ಪ ಭತ್ತದ, ಗಂಗಾಧರಗೌಡ ನವಲಿ, ನಾಗೇಶ ಡಂಕನಕಲ್, ಬಸವಂತಗೌಡ ಪಾಟೀಲ,ರಾಮನಗೌಡ ಬುನ್ನಟ್ಟಿ, ಮಲ್ಲಿಕಾರ್ಜುನಗೌಡ ಪಾಟೀಲ, ವಿರುಪಾಕ್ಷಗೌಡ ಪಾಟೀಲ, ಪಟ್ಪಣ ಪಂಚಾಯಿತಿ ಸದಸ್ಯರಾದ ‌ನೂರುಸಾಬ ಗಡ್ಡಿಗಾಲ, ಅನಿಲಕುಮಾರ ಬಿಜ್ಜಳ, ರಾಜಾಸಾಬ ನಂದಾಪುರ,ಶರಣಗೌಡ ಪಾಟೀಲ, ಸಿದ್ದಾರ್ಥ ಕಲ್ಲಬಾಗಿಲಮಠ, ಕಂಠ ರಂಗಪ್ಪ ನಾಯಕ, ರಾಕೇಶ ಕಂಪ್ಲಿ , ರವಿಶಂಕರ್ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT