ಗಂಗಾವತಿ: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಸಿಪಿಐ ಮುಖಂಡರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಸಮಿತಿಯ ಕಾರ್ಯದರ್ಶಿ ಎ. ಹುಲಗಪ್ಪ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಪ್ಪು ನಿರ್ಧಾರಗಳಿಂದ ಬಡ ಜನರು, ರೈತರು, ಕಾರ್ಮಿಕರ ಜೀವನ ನಡೆಯುವುದೇ ಕಷ್ಟಕರವಾಗಿದೆ. ಬಿಜೆಪಿ ಪಕ್ಷ ದ್ವಂದ್ವ ನಿರ್ಧಾರಗಳಿಂದ ಕಾರ್ಪೋರೆಟ್ ಉದ್ಯಮಿಗಳಿಗೆ ಒಳಿತು ಮಾಡಲು, ಬಡ ಜನರಿಗೆ ಬೆಲೆ ಏರಿಕೆ ತಟ್ಟಿಸಿ ಬಲಿ ಪಶುಗಳನ್ನಾಗಿ ಮಾಡುತ್ತಿದೆ ಎಂದರು.
ಜನ ವಿರೋಧಿ, ರೈತ ವಿರೋಧಿ ಯೋಜನೆಗಳನ್ನು ಜಾರಿ ಮಾಡುವ ಬಿಜೆಪಿ ಪಕ್ಷವನ್ನು ಸಾರ್ವಜನಿಕರು ಕಿತ್ತು ಒಗೆಯಬೇಕು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷ ನೆಲೆ ಕಾಣದಂತೆ ಮಾಡಬೇಕು ಎಂದು ಸಂಘಟನೆಗಳಿಗೆ ಕಿವಿಮಾತು ಹೇಳಿದರು.