ಹನುಮಸಾಗರ, ಹೂಲಗೇರಿ, ಹನುಮನಾಳ, ಅಡವಿಭಾವಿ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ. ಮೊದಲು ಬಿತ್ತನೆಯಾದ ಬೆಳೆ ಈಗ ಹೂವು ಬಿಡುವ ಹಂತದಲ್ಲಿದ್ದರೆ, ನಂತರದಲ್ಲಿ ಬಿತ್ತನೆ ಮಾಡಿದ ಬೆಳೆ ಆರೋಗ್ಯಕರವಾಗಿದೆ. ಬೆಳೆ ನೋಡಿಕೊಂಡು ಸುಮ್ಮನಿರದೆ ಬೆಳೆಯಲ್ಲಿ ಏನಾದರೂ ಬದಲಾವಣೆ ಕಂಡುಬಂದರೆ ರೈತರು ಕೂಡಲೇ ಉಪಶಮನ ಕ್ರಮ ಕೈಕೊಳ್ಳಬೇಕು ಎಂದು ತಿಳಿಸಿದರು.