ತಾಲ್ಲೂಕಿನ ಕಾರಟಗಿ ಹಾಗೂ ಸಿದ್ದಾಪುರ ಹೋಬಳಿಯ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಶಾಸಕ ದಢೇಸೂಗೂರು ಭಾನುವಾರ ನೀಡಿ ಪರಿಶೀಲಿಸಿದರಲ್ಲದೇ ಮಳೆಗೆ ಕೇವಲ ಶೇ. 25ರಷ್ಟು ಮಾತ್ರ ಬೆಳೆ ನಾಶವಾಗಿದೆ ಎಂದರು. ಬಿಜೆಪಿ ಬ್ಲಾಕ್ ಅಧ್ಯಕ್ಷ ಚಂದ್ರಶೇಖರ ಮುಸಾಲಿ, ಗಂಗಾವತಿ ಎಪಿಎಂಸಿ ಅಧ್ಯಕ್ಷ ಚಂದ್ರುಗೌಡ ಯರಡೋಣಾ, ವಿಶೇಷ ಎಪಿಎಂಸಿ ನಿರ್ದೇಶಕ ಜಿ. ಗೋಪಾಲರಾವ್, ಮಾಜಿ ನಿರ್ದೇಶಕ ಬಿ. ಕಾಶಿವಿಶ್ವನಾಥ, ಮಾಜಿಅಧ್ಯಕ್ಷ ಸಿ. ದುರ್ಗಾರಾವ್, ಪುರಸಭೆ ಮಾಜಿ ಸದಸ್ಯ ಜಿ. ತಿಮ್ಮನಗೌಡ ಪ್ರಮುಖರಾದ ಗುರುಸಿದ್ದಪ್ಪ ಯರಕಲ್ ಹಾಗೂ ಮಂಜುನಾಥ ಮಸ್ಕಿ ಇದ್ದರು.