ಕೊಪ್ಪಳ: ಜಿಲ್ಲೆಯಲ್ಲಿ ವಿವಿಧೆಡೆ ಪರಿಶಿಷ್ಟರ ಮೇಲೆ ಹಲ್ಲೆ ಮಾಡಿದ ಸವರ್ಣೀಯರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಜಿಲ್ಲಾ ಘಟಕದ ಸದಸ್ಯರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಅವರಿಗೆ ಮನವಿ ಸಲ್ಲಿಸಿದರು.
ಹಲ್ಲೆಗೊಳಗಾದ ಪರಿಶಿಷ್ಟರಿಗೆ ಸಮಾಜ ಕಲ್ಯಾಣ ಇಲಾಖೆ ಭೂ ಒಡೆತನ ಯೋಜನೆಯಲ್ಲಿ ಪ್ರತಿಯೊಬ್ಬರಿಗೆ ಎರಡು ಎಕರೆ ನೀರಾವರಿ ಜಮೀನು ನೀಡಿ ಕೊಳವೆ ಬಾವಿ ಕೊರೆಯಿಸಿಕೊಟ್ಟು ವ್ಯವಸಾಯದ ಸೌಲಭ್ಯ ಒದಗಿಸಬೇಕು. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ವಾರಕ್ಕೊಂದು ದಿನ ಪರಿಶಿಷ್ಟರ ದಿನ ಆಚರಿಸಬೇಕು. ಕಾರಟಗಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಪರಿಶಿಷ್ಟರಿಗೆನಂದಿಹಳ್ಳಿ ಪರಿಶಿಷ್ಟರಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮೇಲಿನ ಹಲ್ಲೆಯನ್ನೂ ಇದೇ ವೇಳೆ ಖಂಡಿಸಿದರು.
ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷ ದಾದಾಸಾಹೇಬ್ ಎನ್. ಮೂರ್ತಿ, ಜ್ಞಾನಸುಂದರ, ಬಸವರಾಜ ಸಾಸಲಮರಿ, ಮರಿಯಪ್ಪ ಯತ್ನಟ್ಟಿ, ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ ವೈ. ಮಾದನೂರ, ಫಕ್ಕೀರಪ್ಪ ದೊಡ್ಡಮನಿ, ಮುದಿಯಪ್ಪ ಪೂಜಾರ, ಶಿವಪ್ಪ, ನಾಗರಾಜ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.