ಕೊಪ್ಪಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ2019-20ನೇ ಸಾಲಿನಎಸ್ಸಿ, ಎಸ್ಟಿ ಸಂಘ ಸಂಸ್ಥೆಗಳ ವಾದ್ಯ ಪರಿಕರಗಳ ಖರೀದಿಗೆ ಬಂದ ಹಣವು ಮರಳಿ ಹೋಗಿದ್ದು, ಅದನ್ನು ನೀಡಬೇಕು ಎಂದು ಜಿಲ್ಲೆಯ ಕಲಾವಿದರು ಆಗ್ರಹಿಸಿದ್ದಾರೆ.
ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ರಶ್ಮಿ ಅವರಿಗೆ ಮನವಿ ಸಲ್ಲಿಸಿ, ಇಲಾಖೆಯನ್ನು ನಂಬಿ ಬದುಕುತ್ತಿರುವ ಕಲಾವಿದರಿಗೆ ಇದರಿಂದ ಅನುಕೂಲವಾಗುತ್ತದೆ. ಅಲ್ಲದೆ ಹಿಂದುಳಿದ ಭಾಗದ ಕಲಾವಿದರು ಸಂಗೀತ ಸಾಮಗ್ರಿ ಪರಿಕರ ಖರೀದಿಸಲು ಅಶಕ್ತರಾಗಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಕಲಾವಿದರು ತೀವ್ರ ಸಂಕಷ್ಟ ಪರಿಸ್ಥಿತಿ ಅನುಭವಿಸಿದ್ದು, ಅವರ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.
'ರಾಜ್ಯದಾದ್ಯಂತ ಸಾಮಗ್ರಿ ಖರೀದಿಗೆ ಹಣ ಮಂಜೂರು ಮಾಡಲಾಗಿದೆ. ಆದರೆ ಕೊಪ್ಪಳ ಜಿಲ್ಲೆಗೆ ಮಾತ್ರ ಅನುದಾನ ಬಂದಿಲ್ಲ. ಈ ರೀತಿ ತಾರತಮ್ಯ ಸರಿಯಲ್ಲ' ಎಂದು ರಂಗ ಕಲಾವಿದೆ ಸುಧಾ ಮುತ್ತಾಳ, ವೆಂಕಟೇಶ, ಸುಖಮುನಿ, ಮರಿಸ್ವಾಮಿ, ಗ್ಯಾನೇಶ್, ಮರಿಯಪ್ಪ, ಮಾರುತಿ ವಿವರಿಸಿದರು.
ಮನವಿ ಸ್ವೀಕರಿಸಿದ ಅಧಿಕಾರಿ ರಶ್ಮಿ, ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. 12ಕ್ಕೂ ಹೆಚ್ಚು ಸಂಸ್ಥೆಗಳ ಕಲಾವಿದರು ಈ ಸಂದರ್ಭದಲ್ಲಿ ಇದ್ದರು.