ಧ್ವಜ ಹಾಗೂ ಕಾಯಿಯನ್ನು ಪ್ರಮುಖರ ಮನೆಯಿಂದ ಮೆರವಣಿಗೆ ಮೂಲಕ ದೇವಸ್ಥಾನದ ವರೆಗೆ ತರಲಾಯಿತು. ಭಕ್ತರು ದೇವಸ್ಥಾನದಿಂದ ಪಾದಗಟ್ಟೆ ವರೆಗೆ ರಥ ಎಳೆದು ಸಂಭ್ರಮಿಸಿದರು. ಹೂವು, ಬಾಳೆಹಣ್ಣು, ಉತ್ತುತ್ತಿ ತೇರಿನತ್ತ ಎಸೆದರು. ವೇದ ಮಂತ್ರಗಳ ಘೋಷಣೆ ಮುಗಿಲು ಮುಟ್ಟಿತ್ತು. ಭಕ್ತರು ದೀವಟಿಗೆ ಹಿಡಿದು ಭಕ್ತಿ ಮೆರೆದರು.