‘ಪ್ರಜಾವಾಣಿ’ ಜೊತೆಗೆ ಗ್ರಾಮದ ಯುವಕರಾದ ಮಹಾಂತೇಶ ಹಾಗೂ ರಾಜು ಸಿಂದೋಗಿ ಮಾತನಾಡಿ, ‘ಹಲವಾರು ವರ್ಷಗಳ ಹಿಂದೆ ನಿರ್ಮಿಸಿದ ಶೌಚಾಲಯ ಬಿದ್ದು ನಿರೂಪಯುಕ್ತವಾಗಿದೆ. ಚರಂಡಿ ನೀರು ಶಾಲೆ ಮೈದಾನದೊಳಗೆ ಬಂದು ಗಲೀಜು ವಾತಾವರಣ ಉಂಟಾಗಿದೆ. ಆವರಣ ಗೋಡೆ ನಿರ್ಮಾಣ ಹಾಗೂ ಎತ್ತರಗೊಳಿಸಬೇಕು. ಗೇಟ್ ಅಳವಡಿಸಬೇಕು. ನೀರು ಪೂರೈಕೆ ಮಾಡಬೇಕು’ ಎಂದು ಹೇಳಿದ್ದಾರೆ.