ಗಂಗಾವತಿ: ‘ಕ್ಷಯ ಮುಕ್ತ ಗಂಗಾವತಿ ನಗರದ ಕನಸು ನನಸಾಗಬೇಕಾದರೆ ಅದಕ್ಕೆ ಖಾಸಗಿ ವೈದ್ಯರೂ ಕೈಜೋಡಿಸಬೇಕು’ ಎಂದು ಕ್ಷಯರೋಗ ವಿಭಾಗದ ಮೇಲ್ವಿಚಾರಕ ಮಲ್ಲಿಕಾರ್ಜುನ ಹೇಳಿದರು.
ನಗರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಶನಿವಾರ ಭೇಟಿ ನೀಡಿದ ಅವರು,‘ತಮ್ಮ ಆಸ್ಪತ್ರೆಗೆ ಬರುವ ಸಂಶಯಾಸ್ಪದ ಕ್ಷಯರೋಗಿಗಳನ್ನು ಹಾಗೂ ದೃಢಪಟ್ಟ ರೋಗಿಗಳ ಕುರಿತು ಸರ್ಕಾರಕ್ಕೆ ವರದಿ ಮಾಡುವ ಮೂಲಕ ವೈದ್ಯರು ಸಹಕರಿಸಬೇಕು’ ಎಂದರು.
ನಂತರ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಹುಸೇನ್ ಬಾಷಾ ಕಫ ಸಂಗ್ರಹಿಸಲು ಬಳಸುವ ಫಾಲ್ಕನ್ ಟ್ಯೂಬ್ ಮತ್ತು ಪ್ರಯೋಗಶಾಲಾ ನಮೂನೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡುವ ಮೂಲಕ ಇಲಾಖೆಗೆ ಸಹಕರಿಸುವಂತೆ ತಿಳಿಸಿದರು.