ಈ ಕುರಿತು ಪರಸಪ್ಪ ಮಾತನಾಡಿರುವ ವಿಡಿಯೊವನ್ನು ಬಿಜೆಪಿ ಮುಖಂಡರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು ‘ಪಿಎಸ್ಐ ಹಗರಣಕ್ಕೆ ಸಂಬಂಧಿಸಿದ ಆಡಿಯೊ ಬಿಡುಗಡೆಯಾಗಿತ್ತು. ಕಾರಟಗಿ ಪುರಸಭೆ ಸದಸ್ಯ ಆನಂದ ಎಂ. ಅವರೊಂದಿಗೆ ನಮ್ಮದು ಹಣದ ವ್ಯವಹಾರವಿತ್ತು. ತಂಟೆ ತಕರಾರು ಕೂಡ ಇತ್ತು. ಈ ಸಮಸ್ಯೆ ಪರಿಹರಿಸಿಕೊಡಿ ಎಂದು ಶಾಸಕ ದಢೇಸಗೂರು ಬಳಿ ಹೋಗಿದ್ದೆವು. ಪರಿಹರಿಸಿಕೊಡುವುದಾಗಿ ಭರವಸೆ ನೀಡಿ ಸಾಕಷ್ಟು ವಿಳಂಬ ಮಾಡಿದ್ದರು. ದಢೇಸಗೂರು ಸಾಹೇಬ್ರು ಮತ್ತು ನನ್ನ ನಡುವೆ ಯಾವುದೇ ದುಡ್ಡಿನ ವ್ಯವಹಾರವಾಗಿಲ್ಲ’ ಎಂದು ಹೇಳಿದ್ದಾರೆ.