ಕನಕಗಿರಿ: ಇಲ್ಲಿನ ತಾಲ್ಲೂಕು ಪಂಚಾಯಿತಿಯ ನೂತನ ಕಾರ್ಯನಿರ್ವಹಣಾಧಿಕಾರಿಯಾಗಿ ಕೆ.ವಿ. ಕಾವ್ಯರಾಣಿ ಅವರು ಸೋಮವಾರ ಅಧಿಕಾರ ವಹಿಸಿಕೊಂಡರು.
ನಂತರ ಮಾತನಾಡಿದ ಅವರು,‘ತಾಲ್ಲೂಕಿನಲ್ಲಿ ನರೇಗಾ ಹಾಗೂ ವಸತಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಲಾಗುವುದು’ ಎಂದು ತಿಳಿಸಿದರು.
ಕಳೆದ ಒಂದು ವರ್ಷದಿಂದ ಪ್ರಭಾರ ಇಒ ಆಗಿ ಕೆಲಸ ಮಾಡಿದ ಡಾ.ಡಿ.ಮೋಹನ್ ಅವರನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸನ್ಮಾನಿಸಿ ಬೀಳ್ಕೊಟ್ಟರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶಂಶೀರ್ ಅಲಿ, ಅಮರೇಶ ರಾಥೋಡ, ತಾ.ಪಂ. ಸಿಬ್ಬಂದಿ ಕೊಟ್ರಯ್ಯ, ಪವನಕುಮಾರ, ಯಂಕೋಬ, ಅಕ್ಷಯ, ಬಾಳಪ್ಪ ತಾಳಕೇರಿ, ಮಂಜುನಾಥ, ತಾಂತ್ರಿಕ ಸಹಾಯಕರಾದ ವಿರುಪಾಕ್ಷಯ್ಯ, ಮಲ್ಲಿಕಾರ್ಜುನ ಹಾಗೂ ವಿಜಯಲಕ್ಷ್ಮೀ ಇದ್ದರು.