ಕೃಷಿಕರು ಪರ್ಯಾಯ ಉದ್ಯೋಗಕ್ಕೆ ಮಾರು ಹೋಗಿರುವ ಹಿನ್ನೆಲೆಯಲ್ಲಿ ಸ್ವಂತ ಜಮೀನಿದ್ದರೂ ಲಾವಣಿ (ಲೀಜ್) ಕೊಟ್ಟು ಬೆಳೆ ಬೆಳೆಯಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದ್ದು, ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರಕ್ಕಾಗಿ ಮಾರುಕಟ್ಟೆ ಅವಲಂಬಿಸಿ ವೆಚ್ಚ ಹೆಚ್ಚಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರ ಲಾಭದಾಯಕವಲ್ಲ ಎನ್ನುವುದು ಸತ್ಯ ಎಂದರು. ಪ್ರಗತಿಪರ ಕೃಷಿಕರಾದ ಶಂಕ್ರಪ್ಪ ಕವಡಿಕಾಯಿ, ಶೇಖರಪ್ಪ ಮಡಿವಾಳರ್, ಶಿವನಗೌಡ ಪಾಟೀಲ, ದೇಸಾಯಿ ಮಾತನಾಡಿದರು.ಕೃಷಿಕ ಸಮಾಜದ ಅಧ್ಯಕ್ಷ ಚಂದಪ್ಪ ತಳವಾರ ಅಧ್ಯಕ್ಷತೆ ವಹಿಸಿದ್ದರು.ಎಪಿಎಂಸಿ ನಿರ್ದೇಶಕ ಶಂಕ್ರಗೌಡ ಪಾಟೀಲ ಜಾಲಿಹಾಳ, ಪೀಕಾರ್ಡ್ ಬ್ಯಾಂಕ್ ನಿರ್ದೇಶಕ ಬಸನಗೌಡ ಮೇಗೂರು, ನಾಗನಗೌಡ ಪಾಟೀಲ, ಬಸವರಾಜ ಪಾಟೀಲ ಇದ್ದರು. ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ನಾಯಕ ಮಾತನಾಡಿದರು. ಕೃಷಿ ಅಧಿಕಾರಿ ಶಿವಾನಂದ ಮಳಿಗಿ ನಿರೂಪಿಸಿದರು, ಶೇಖರಯ್ಯ ಹಿರೇಮಠ ವಂದಿಸಿದರು. ಇದೇ ವೇಳೆ ರಾಜ್ಯಮಟ್ಟದ ರೈತ ಪ್ರಶಸ್ತಿಗೆ ಆಯ್ಕೆಯಾದ ಶಂಕ್ರಪ್ಪ ಕವಡಿಕಾಯಿ, ದೊಡ್ಡಪ್ಪ ರಸರಡ್ಡಿ, ಶಿವನಗೌಡ ಪಾಟೀಲ, ಬಸಯ್ಯ ಅವರನ್ನು ಸನ್ಮಾನಿಸಲಾಯಿತು.