ಸಂಘಟನೆ ಪ್ರಮುಖರು ಮಾತನಾಡಿ,‘ಕೋವಿಡ್ ಸಮಸ್ಯೆ ಕಾರಣಕ್ಕೆ ಜಾರಿಯಾಗಿದ್ದ ಲಾಕ್ಡೌನ್ ಮತ್ತಿತರೆ ನಿರ್ಬಂಧಗಳು, ಮಾರುಕಟ್ಟೆ ವ್ಯವಸ್ಥೆ ಸ್ಥಗಿತಗೊಂಡಿದ್ದರಿಂದ ರೈತರು ಕಂಗಾಲಾಗುವಂತಾಗಿತ್ತು. ಈಗಲೂ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ. ಹಾಗಾಗಿ ರೈತರ ಎಲ್ಲ ರೀತಿಯ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡಬೇಕು’ ಎಂದರು.