<p><strong>ಕಾರಟಗಿ</strong>: ರಸ್ತೆಯಲ್ಲಿದ್ದ ತಿಪ್ಪೆಗೆ ಬೆಂಕಿ ಹತ್ತಿಕೊಂಡು ಅದು ವ್ಯಾಪಿಸುತ್ತಿರುವುದನ್ನು ಹಾಗೂ ಪಕ್ಕದ ಹುಲ್ಲಿನ ಬಣಿವೆ ಅಗ್ನಿ ಅನಾಹುತಕ್ಕೀಡಾಗುವುದನ್ನು ತಪ್ಪಿಸಿದ ಘಟನೆ ತಾಲ್ಲೂಕಿನ ನಾಗನಕಲ್ ಬಳಿ ಬುಧವಾರ ಜರುಗಿದೆ.</p>.<p>ಆರಂಭದಲ್ಲಿ ತಿಪ್ಪೆಯೊಂದಕ್ಕೆ ಬೆಂಕಿ ಕಾಣಿಸಿಕೊಂಡು, ಪಕ್ಕದ ತಿಪ್ಪೆ, ಬಣಿವೆಗಳಿಗೆ ವ್ಯಾಪಿಸುವುದನ್ನು ಅರಿತ ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸಕಾಲಕ್ಕೆ ಆಗಮಿಸಿ, ಬೆಂಕಿ ನಂದಿಸಿ ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾದರು.</p>.<p>ಗ್ರಾಮದ ವೆಂಕಟೇಶ ಕೆಂಚನಗುಡ್ಡ ಪ್ರತಿಕ್ರಿಯಿಸಿ, ತ್ವರಿತವಾಗಿ ಅಗ್ನಿಶಾಮಕದ ದಳದವರು ಆಗಮಿಸಿ ಬೆಂಕಿ ನಂದಿಸದಿದ್ದರೆ, ಇತರ ಹುಲ್ಲಿನ ಬಣಿವೆಗೆ ಬೆಂಕಿ ತಾಗಿ ಹೆಚ್ಚು ಹಾನಿ ಸಂಭವಿಸುತ್ತಿತ್ತು. ಅಗ್ನಿಶಾಮಕ ಸಿಬ್ಬಂದಿಯ ಶ್ರಮ ಸಾರ್ಥಕವಾಯಿತು ಎಂದರು.</p>.<p>ಅಗ್ನಿ ಶಾಮಕ ಠಾಣೆಯ ಅಧಿಕಾರಿ ದಯಾನಂದ ಗೌಡ ಸಿಬ್ಬಂದಿ ಹೊಸಗೇರಪ್ಪ, ಸೂಗೂರೇಶ್, ಮಲ್ಲಿಕಾರ್ಜುನ, ಉಮಾಕಾಂತ, ಮಂಜುನಾಥ ಹಾಗೂ ಗ್ರಾಮದ ಜಗದೀಶ್ ಹುಲಿಹೈದರ, ಭೋಗೇಶ್ ಸಂಕನಾಳ, ಬಸವರಾಜ್ ಬಸಾಪುರ, ಹನುಮಂತರೆಡ್ಡಿ ಮೆದಿಕಿನಾಳ ಬೆಂಕಿ ನಂದಿಸುವಲ್ಲಿ ಶ್ರಮಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರಟಗಿ</strong>: ರಸ್ತೆಯಲ್ಲಿದ್ದ ತಿಪ್ಪೆಗೆ ಬೆಂಕಿ ಹತ್ತಿಕೊಂಡು ಅದು ವ್ಯಾಪಿಸುತ್ತಿರುವುದನ್ನು ಹಾಗೂ ಪಕ್ಕದ ಹುಲ್ಲಿನ ಬಣಿವೆ ಅಗ್ನಿ ಅನಾಹುತಕ್ಕೀಡಾಗುವುದನ್ನು ತಪ್ಪಿಸಿದ ಘಟನೆ ತಾಲ್ಲೂಕಿನ ನಾಗನಕಲ್ ಬಳಿ ಬುಧವಾರ ಜರುಗಿದೆ.</p>.<p>ಆರಂಭದಲ್ಲಿ ತಿಪ್ಪೆಯೊಂದಕ್ಕೆ ಬೆಂಕಿ ಕಾಣಿಸಿಕೊಂಡು, ಪಕ್ಕದ ತಿಪ್ಪೆ, ಬಣಿವೆಗಳಿಗೆ ವ್ಯಾಪಿಸುವುದನ್ನು ಅರಿತ ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸಕಾಲಕ್ಕೆ ಆಗಮಿಸಿ, ಬೆಂಕಿ ನಂದಿಸಿ ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾದರು.</p>.<p>ಗ್ರಾಮದ ವೆಂಕಟೇಶ ಕೆಂಚನಗುಡ್ಡ ಪ್ರತಿಕ್ರಿಯಿಸಿ, ತ್ವರಿತವಾಗಿ ಅಗ್ನಿಶಾಮಕದ ದಳದವರು ಆಗಮಿಸಿ ಬೆಂಕಿ ನಂದಿಸದಿದ್ದರೆ, ಇತರ ಹುಲ್ಲಿನ ಬಣಿವೆಗೆ ಬೆಂಕಿ ತಾಗಿ ಹೆಚ್ಚು ಹಾನಿ ಸಂಭವಿಸುತ್ತಿತ್ತು. ಅಗ್ನಿಶಾಮಕ ಸಿಬ್ಬಂದಿಯ ಶ್ರಮ ಸಾರ್ಥಕವಾಯಿತು ಎಂದರು.</p>.<p>ಅಗ್ನಿ ಶಾಮಕ ಠಾಣೆಯ ಅಧಿಕಾರಿ ದಯಾನಂದ ಗೌಡ ಸಿಬ್ಬಂದಿ ಹೊಸಗೇರಪ್ಪ, ಸೂಗೂರೇಶ್, ಮಲ್ಲಿಕಾರ್ಜುನ, ಉಮಾಕಾಂತ, ಮಂಜುನಾಥ ಹಾಗೂ ಗ್ರಾಮದ ಜಗದೀಶ್ ಹುಲಿಹೈದರ, ಭೋಗೇಶ್ ಸಂಕನಾಳ, ಬಸವರಾಜ್ ಬಸಾಪುರ, ಹನುಮಂತರೆಡ್ಡಿ ಮೆದಿಕಿನಾಳ ಬೆಂಕಿ ನಂದಿಸುವಲ್ಲಿ ಶ್ರಮಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>