ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಒಬ್ಬರು ಮೃತಪಟ್ಟಿದ್ದರು. ಪೊಲೀಸರು ಮೃತದೇಹವನ್ನು ಶವಪರೀಕ್ಷೆಗಾಗಿ ಆಸ್ಪತ್ರೆ ಗೆ ಸಾಗಿಸುತ್ತಿದ್ದಾಗ ಕೆಲವರು ರಸ್ತೆ ತಡೆ ನಡೆಸಿ, ಮೃತದೇಹವನ್ನು ಸಾಗಿಸಲು ಅಡ್ಡಿಪಡಿಸಿದ್ದರು.ಅಪಘಾತದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ರು ಭರವಸೆ ನೀಡಿದ್ದರೂ ಪರಿಸ್ಥಿತಿ ಶಾಂತವಾಗಲಿಲ್ಲ. ಕೆಲವರು ಕಲ್ಲು ತೂರಾಟ ಸಹ ನಡೆಸಿದರು. ಇದರಿಂದ ಕರ್ತವ್ಯದಲ್ಲಿದ್ದ ಸಬ್ ಇನ್ಸ್ಪೆಕ್ಟರ್ ಸಂತೋಷ ಗಾಯಗೊಂಡಿದ್ದು, ಬಸ್ ನ ಗಾಜು ಒಡೆದು ಹಾನಿಯಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.