ಕೊಪ್ಪಳ: ‘ಸ್ವಾತಂತ್ರ್ಯ ಹೋರಾಟದ ಏಳುಬೀಳುಗಳು, ಸೋಲು, ಗೆಲುವುಗಳ ಹೀಗೆ ಅನೇಕ ವಿಷಯಗಳನ್ನು ಕೇಳಿದ್ದೇನೆ. ಕೆಲವನ್ನು ಕಂಡಿದ್ದೇನೆ. ಇನ್ನೂ ಹಲವು ಸಂಗತಿಗಳನ್ನು ಸ್ವತಃ ಅನುಭವಿಸಿದ್ದೇವೆ. ಇವೆಲ್ಲವುಗಳಿಗಿಂತ ಹೆಚ್ಚಾಗಿ 1934ರಲ್ಲಿ ಭಾನಾಪುರ ರೈಲ್ವೆ ನಿಲ್ದಾಣದಲ್ಲಿ ಮಹಾತ್ಮ ಗಾಂಧಿ ಅವರನ್ನು ಭೇಟಿಯಾಗಿದ್ದೇ ನನ್ನ ಬದುಕಿನ ಅಮೃತ ಗಳಿಗೆ...‘