ಕೊಪ್ಪಳ: ವಿವಿಧ ಸ್ವಾತಂತ್ರ್ಯ ಹೋರಾಟಗಾರರ ಜನ್ಮ ದಿನದ ಪ್ರಯುಕ್ತ ನ. 12ರಂದು ಬೆಳಿಗ್ಗೆ 10.30ಕ್ಕೆ ನಗರದ ಸಾಹಿತ್ಯ ಭವನದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಜಯಂತಿ ಆಚರಿಸಲಾಗುವುದು ಎಂದು ಕೊಪ್ಪಳದ ಯುವ ಸಮಿತಿಯ ನಾಯಕ ಅಮ್ಜದ್ ಪಟೇಲ ತಿಳಿಸಿದ್ದಾರೆ.
ಕೊಪ್ಪಳದ ಮುಸ್ಲಿಂ ಯುವ ಸಮಿತಿ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಮೈಸೂರು ಶಿವಯೋಗಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ತುಮಕೂರಿನ ಪ್ರಗತಿಪರ ಚಿಂತಕ ನೀಕೆತ್ ರಾಜಮೌರ್ಯ, ಸಾಮಾಜಿಕ ಹೋರಾಟಗಾರ ಸುಧೀರ್ ಕುಮಾರ ಮುರೊಳ್ಳಿ ಪಾಲ್ಗೊಳ್ಳುವರು.