ಗಾಂಧೀಜಿ ಭೇಟಿಯ ನೆನಪು ಚಿರಸ್ಥಾಯಿಯಾಗಲಿ ಎನ್ನುವ ಕಾರಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಶಿವಮೂರ್ತಿ ಸ್ವಾಮಿ ಅಳವಂಡಿ ನೇತೃತ್ವದಲ್ಲಿ ಅಲ್ಲಿ ಸ್ಮಾರಕ ಫಲಕ ನಿರ್ಮಿಸಲಾಗಿದೆ. ಈ ಕುರುಹು ಹಾಗೇ ಇರಲಿ ಎನ್ನುವ ಆಸೆಯಿಂದ ಕಲಾವಿದ ಕಾಳಪ್ಪ ಪತ್ತಾರ ಗಾಂಧೀಜಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ಸಂದರ್ಭದ ಚಿತ್ರ ಬಿಡಿಸಿದ್ದಾರೆ. ಈ ಚಿತ್ರವನ್ನು ಗಾಂಧೀಜಿ ಅವರಿಗೆ ಕಾಣಿಕೆಯಾಗಿ ಕೊಟ್ಟು ಕಳುಹಿಸಿದ್ದಾರೆ. ಇವರ ಮಗ ಕೂಡ ಇದಕ್ಕೆ ಕೈಜೋಡಿಸಿ ತಾವು ಬಿಡಿಸಿದ ಚಿತ್ರವನ್ನು ರೈಲ್ವೆ ನಿಲ್ದಾಣದಲ್ಲಿ ತೂಗು ಹಾಕಿದ್ದಾರೆ.