<p><strong>ಗಂಗಾವತಿ:</strong> ಹಿಂದೂಗಳ ಹೊಸ ವರ್ಷದ ಆರಂಭ ಸೂಚಿಸುವ ಯುಗಾದಿ ಹಬ್ಬದ ನಂತರದ ದಿನವಾದ ಶುಕ್ರವಾರ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಬಣ್ಣದ ಓಕುಳಿ ಸಂಭ್ರಮದಿಂದ ಜರುಗಿತು.</p><p>ಮರುಕುಂಬಿ ಗ್ರಾಮದಲ್ಲಿ ದಲಿತರು ಮತ್ತು ಸವರ್ಣೀಯರು ಒಂದುಗೂಡಿ ಬಣ್ಣದಾಟ ಆಡಿದ್ದು ವಿಶೇಷವಾಗಿತ್ತು.</p><p>ಮರುಕುಂಬಿ ಗ್ರಾಮದಲ್ಲಿ ಈ ಹಿಂದೆ ಸವರ್ಣೀಯರು ಮತ್ತು ದಲಿತರ ನಡುವೆ ನಡೆದ ಜಾತಿ ಸಂಘರ್ಷ ಸಾಬೀತಾಗಿ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸವರ್ಣೀಯರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು.</p><p>ನಂತರ ಎಲ್ಲ ಸವರ್ಣೀಯರೂ ಹೈಕೋರ್ಟ್ನ ಧಾರವಾಡ ಪೀಠದಲ್ಲಿ ಷರತ್ತುಬದ್ಧ ಜಾಮೀನು ಪಡೆದು, ಹೊರಬಂದ ನಂತರ ಕೆಲ ದಿನಗಳ ಕಾಲ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಕ್ರಮೇಣ ಎಲ್ಲರೂ ಬದಲಾಗುತ್ತಾ, ಗ್ರಾಮದಲ್ಲಿ ದಲಿತರು, ಸವರ್ಣೀಯರು ಒಟ್ಟಾಗಿ ಇರಬೇಕೆಂಬ ನಿಟ್ಟಿನಲ್ಲಿ ಕೆಲ ತಿಂಗಳ ಹಿಂದೆ 3 ವರ್ಷಗಳಿಗೊಮ್ಮೆ ನಡೆಯುವ ಗ್ರಾಮ ದೇವತೆ ದುರ್ಗಾದೇವಿ ಜಾತ್ರೆ ಸಂಭ್ರಮದಿಂದ ಆಚರಿಸಿದ್ದರು.</p><p>ಇನ್ನೂ ಕೆಲವರ ನಡುವೆ ಭಿನ್ನಭಿಪ್ರಾಯಗಳಿದ್ದು, ಶುಕ್ರವಾರ ಮರಕುಂಬಿ ಗ್ರಾಮದಲ್ಲಿ ದಲಿತರು, ಸವರ್ಣೀಯರು ಪರಸ್ಪರ ಬಣ್ಣ ಹಚ್ಚಿ ಶುಭಾಶಯ ವಿನಿಮಯ ಮಾಡಿಕೊಂಡು, ಬಣ್ಣದ ಓಕುಳಿ ಆಡಿ ಸಂಭ್ರಮಿಸಿದರು. ಯುವಕರು, ಹಿರಿಯರು, ಚಿಣ್ಣರು ಬಣ್ಣದ ಹಬ್ಬದಲ್ಲಿ ಭಾಗಿಯಾಗಿದ್ದರು. ಮಹಿಳೆಯರು ಅಷ್ಟೇನೂ ಆಸಕ್ತಿ ತೋರಲಿಲ್ಲ. ಎರಡು ವರ್ಷಗಳ ನಂತರ ಬಣ್ಣದ ಹಬ್ಬ ಒಟ್ಟಾಗಿ ಆಚರಿಸಿರುವುದು ಕಂಡುಬಂದಿತು.</p><p><strong>ಎಲ್ಲೆಲ್ಲಿ ಬಣ್ಣದ ಓಕುಳಿ:</strong> ತಾಲ್ಲೂಕಿನ ಹನುಮನಹಳ್ಳಿ, ಚಿಕ್ಕರಾಂಪುರ, ಆನೆಗೊಂದಿ, ಕಡೆ ಬಾಗಿಲು, ಢಣಾಪುರ, ಹೆಬ್ಬಾಳ ಸೇರಿ ಗಂಗಾವತಿ ನಗರದ ಹಿರೇಜಂತಕಲ್ ಭಾಗದಲ್ಲಿ ಬಣ್ಣದ ಓಕುಳಿ ಆಡಲಾಯಿತು. ಕೆಲ ಗ್ರಾಮಗಳಲ್ಲಿ ಯುವಕರು ಡಿಜೆ ಸದ್ದಿಗೆ ಹೆಜ್ಜೆ ಹಾಕಿದರು. ಇನ್ನೂ ಕೆಲ ಗ್ರಾಮಗಳಲ್ಲಿ ಹಲಿಗೆ, ತಾಷ ಸದ್ದಿಗೆ ಕುಣಿದರು.</p><p>ದುರ್ಗಾ ಪರಮೇಶ್ವರಿಗೆ ವಿಶೇಷ ಪೂಜೆ: ಯುಗಾದಿ ಹಬ್ಬದ ನಿಮಿತ್ತ ತಾಲ್ಲೂಕಿನ ಢಣಾಪುರ ಗ್ರಾಮದ ಗ್ರಾಮ ದೇವತೆ ದುರ್ಗಾ ಪರಮೇಶ್ವರಿ ದೇವಿಗೆ ವಿಶೇಷ ಅಲಂಕಾರ ಮಾಡುವುದರ ಜೊತೆಗೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.</p><p>ಈ ಸಂದರ್ಭದಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.</p><p><strong>ಪರಸ್ಪರ ಬಣ್ಣ ಎರಚಾಟ:</strong></p><p>ಕನಕಗಿರಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಸಡಗರ–ಸಂಭ್ರಮದಿಂದ ಓಕಳಿ ಆಡಲಾಯಿತು.</p><p>ರಾಜ್ಯದೆಲ್ಲೆಡೆ ಬಹು ತೇಕ ಹೋಳಿ ಹಬ್ಬದ ಸಮಯದಲ್ಲಿ ಬಣ್ಣದಾಟ ಆಡಿದರೆ, ಈ ಭಾಗದಲ್ಲಿಯುಗಾದಿ ಹಬ್ಬದ ಮರು ದಿನ (ಕೆಟ್ಟ ಕರಿ) ಬಣ್ಣದ ಹಬ್ಬ ಆಚರಣೆ ಮಾಡ ಲಾತ್ತಿದ್ದು, ಪಟ್ಟಣದಲ್ಲಿ ಚಿಣ್ಣರು, ಮಹಿಳೆಯರು, ಯುವತಿಯರು ಸೇರಿದಂತೆ ಗ್ರಾಮಸ್ಥರು ಪರಸ್ಪರ ಬಣ್ಣ ಎರಚಿ ಸಂತಸ ವ್ಯಕ್ತಪಡಿಸಿದರು.</p><p>ಸಣ್ಣ ಮಕ್ಕಳು ಬಾಟಲಿಗಳಲ್ಲಿ ತುಂಬಿದ ಬಣ್ಣವನ್ನು ದಾರಿ ಹೋಕರು, ಆಯಾ ಓಣಿಯ ಜನರು, ಸ್ನೇಹಿತರ ಮನೆಗೆ ತೆರಳಿ ಬಣ್ಣ ಹಾಕುತ್ತಿರುವುದು ಕಂಡು ಬಂತು. ರಾಜಬೀದಿ, ಡಾ.ಬಿ.ಆರ್.ಅಂಬೇಡ್ಕರ್, ವಾಲ್ಮೀಕಿ ವೃತ್ತ, ಪ್ರತಿ ವಾರ್ಡ್ಗಳಲ್ಲಿ ಬಣ್ಣದ ಆಟ ಗಮನ ಸೆಳೆಯಿತು.</p><p>ತೊಂಡೆತೇವರಪ್ಪ ದೇವಸ್ಥಾನದ ರಸ್ತೆ, ವಾಲ್ಮೀಕಿ ನಗರ, ಇತರೆ ಓಣಿಗಳಲ್ಲಿ ಸಮಾನ ಮನಸ್ಕ ಮಹಿಳೆಯರು ಮನೆ ಮನೆಗೆ ತೆರಳಿ ಬಣ್ಣ ಎರಚಿ ಸಂಭ್ರಮಿಸಿದರು. ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಜಾತಿ–ಧರ್ಮ ಎನ್ನದೆ ಯುವಕರು ಬಣ್ಣದಾಟದಲ್ಲಿ ತೊಡಗಿದ್ದರು.</p><p>ಬಿಸಿಲಿನ ಪ್ರಖರತೆ ಲೆಕ್ಕಿಸದೆ ಯುವಕರು ಬಣ್ಣದಲ್ಲಿ ಮಿಂದು ಕುಣಿದು ಕುಪ್ಪಳಿಸಿದರು. ತಮಟೆ, ಹಲಗಿ ಬಡಿಯುತ್ತಾ ಕೇ ಕೇ ಹಾಕುತ್ತಾ ಬಣ್ಣದಾಟ ಆಡಿದರು. ಸಂಜೆ ಕನಕಾಚಲಪತಿ ದೇವಸ್ಥಾನದಿಂದ ಎದುರ ಹನುಮಪ್ಪ ದೇಗುಲದವರೆಗೆ ಅಶ್ವರೋಹಣ ಉಚ್ಛಾಯ ವಿಜೃಂಭಣೆಯಿಂದ ನಡೆಯಿತು. ಮೂಲ ಸ್ಥಾನಕ್ಕೆ ಅಶ್ವರೋಹಣ ಉಚ್ಛಾಯ ತಲುಪಿದಾಗ, ಬಣ್ಣದಾಟಕ್ಕೆ ತೆರೆ ಬಿತ್ತು. ಅಘೋಷಿತ ಬಂದ್ ವಾತಾವರಣ ಇರುವುದು ಕಂಡುಬಂತು. ಕೆಲವರು ಹೊಲದಲ್ಲಿ ಮಾಂಸದೂಟ, ಸಸ್ಯಹಾರಿ ಊಟ ಸವಿದು ಬಣ್ಣದಾಟದಿಂದ ದೂರ ಉಳಿದರು.</p>. <p><strong>ಕಾರಟಗಿ: ಬಣ್ಣದಲ್ಲಿ ಮಿಂದೆದ್ದ ಜನ:</strong></p><p>ಕಾರಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಯುಗಾದಿಯ ಮರುದಿನವಾದ ಶುಕ್ರವಾರ ಯುವಕರು–ಯುವತಿಯರು ಹಾಗೂ ಚಿಕ್ಕಮಕ್ಕಳು ಪರಸ್ಪರ ಬಣ್ಣ ಎರಚಾಡುತ್ತಾ ಓಕುಳಿಯಾಟದ ಸಂಭ್ರಮದಲ್ಲಿದ್ದರು.</p><p>ಯುಗಾದಿ ಪಾಡ್ಯದ ಮರುದಿನದಂದು ಬಣ್ಣದಾಟ ಆಡುವ ವಾಡಿಕೆ ಈ ಭಾಗದಲ್ಲಿದೆ. ಬೆಳಗ್ಗೆಯಿಂದಲೇ ಯುವಕರು ಮತ್ತು ಚಿಕ್ಕಮಕ್ಕಳು ಹಲಗೆ ಬಾರಿಸುತ್ತಾ, ಅದರ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಕುಣಿದು ಸಂಭ್ರಮಿಸುತ್ತ ರಸ್ತೆಗಳಲ್ಲೆಲ್ಲಾ ತಿರುಗಾಡುತ್ತಾ ಸ್ನೇಹಿತರಿಗೆ, ಪರಿಚಿತರಿಗೆ ಬಣ್ಣ ಎರಚುತ್ತಾ ಸಂಭ್ರಮಿಸುತ್ತಿರುವುದು ಕಂಡುಬಂತು.</p><p>ಬಣ್ಣ ಹಾಗೂ ಬಣ್ಣ ತುಂಬಿದ ನೀರಿನ ಬಾಟಲಿಗಳನ್ನು ಹಿಡಿದು ಕೆಲವರು ತಮ್ಮ ಸ್ನೇಹಿತರ ಮನೆಗಳಿಗೆ ತೆರಳಿ ಬಣ್ಣ ಹಾಕಿ, ಅವರನ್ನೂ ತಮ್ಮೊಂದಿಗೆ ಕರೆತಂದು ಓಕುಳಿಯಾಟ ಆಡಿದರು.</p><p>ಇನ್ನು ಕೆಲ ಯುವಕರು ಕೋಳಿ ಮೊಟ್ಟೆ, ಟೊಮೆಟೊ ತಲೆ ಮೇಲೆ ಒಡೆದು ಮತ್ತೆ ಅದಕ್ಕೆ ಬಣ್ಣ ಹಾಕುತ್ತಿದ್ದರೆ, ಕೆಲವೆಡೆ ಗುಲಾಲ್ ಜೊತೆ ಪೇಂಟ್ ಬಳಕೆ ಮಾಡಿದರು. ಮೈತುಂಬಾ ಬಣ್ಣಗಳನ್ನು ಎರಚಿಕೊಂಡು ಕೇಕೇ ಹಾಕುತ್ತ ಹಲಗೆ, ತಮಟೆ ವಾದನದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಗುಂಪು ಗುಂಪಾಗಿ ಕುಣಿದಾಡುವ ದೃಶ್ಯಗಳು ಸಾಮಾನ್ಯವಾಗಿದ್ದವು.</p><p>ಬಣ್ಣದಾಟದಿಂದಾಗಿ ಪಟ್ಟಣದ ಎಲ್ಲಾ ಅಂಗಡಿ, ಹೋಟೆಲ್ಗಳು ಸೇರಿದಂತೆ ಇತರೆ ವ್ಯಾಪಾರ ವಹಿವಾಟು ಸಂಜೆಯವರೆಗೆ ಸಂಪೂರ್ಣ ಬಂದ್ ಆಗಿತ್ತು.</p><p><strong>ಎಲ್ವಿಟಿ ತಪೋವನ:</strong> ನಾಗನಕಲ್ ಬಳಿಯ ಎಲ್ವಿಟಿ ತಪೋವನದಲ್ಲಿ ನೈಸರ್ಗಿಕ ಬಣ್ಣದಾಟದ ಸಂಭ್ರಮ ಮನೆ ಮಾಡಿತ್ತು. ಪತಂಜಲಿ ಯೋಗ ಸಮಿತಿಯ ಸದಸ್ಯರು, ಸಾಧಕರು ತಮ್ಮ ಪರಿವಾರದೊಂದಿಗೆ ತೋಟದಲ್ಲಿ ನೈಸರ್ಗಿಕ ಬಣ್ಣವನ್ನು ಪರಸ್ಪರ ಎರಚಿ, ಸಂಭ್ರಮಿಸಿದರು. ತಮ್ಮ ಮನೆಗಳಿಂದ ತಂದಿದ್ದ ತರಹೇವಾರಿ ಭೋಜನವನ್ನು ಸಾಮೂಹಿಕವಾಗಿ ಸವಿದು ಖುಷಿಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ:</strong> ಹಿಂದೂಗಳ ಹೊಸ ವರ್ಷದ ಆರಂಭ ಸೂಚಿಸುವ ಯುಗಾದಿ ಹಬ್ಬದ ನಂತರದ ದಿನವಾದ ಶುಕ್ರವಾರ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಬಣ್ಣದ ಓಕುಳಿ ಸಂಭ್ರಮದಿಂದ ಜರುಗಿತು.</p><p>ಮರುಕುಂಬಿ ಗ್ರಾಮದಲ್ಲಿ ದಲಿತರು ಮತ್ತು ಸವರ್ಣೀಯರು ಒಂದುಗೂಡಿ ಬಣ್ಣದಾಟ ಆಡಿದ್ದು ವಿಶೇಷವಾಗಿತ್ತು.</p><p>ಮರುಕುಂಬಿ ಗ್ರಾಮದಲ್ಲಿ ಈ ಹಿಂದೆ ಸವರ್ಣೀಯರು ಮತ್ತು ದಲಿತರ ನಡುವೆ ನಡೆದ ಜಾತಿ ಸಂಘರ್ಷ ಸಾಬೀತಾಗಿ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸವರ್ಣೀಯರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು.</p><p>ನಂತರ ಎಲ್ಲ ಸವರ್ಣೀಯರೂ ಹೈಕೋರ್ಟ್ನ ಧಾರವಾಡ ಪೀಠದಲ್ಲಿ ಷರತ್ತುಬದ್ಧ ಜಾಮೀನು ಪಡೆದು, ಹೊರಬಂದ ನಂತರ ಕೆಲ ದಿನಗಳ ಕಾಲ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಕ್ರಮೇಣ ಎಲ್ಲರೂ ಬದಲಾಗುತ್ತಾ, ಗ್ರಾಮದಲ್ಲಿ ದಲಿತರು, ಸವರ್ಣೀಯರು ಒಟ್ಟಾಗಿ ಇರಬೇಕೆಂಬ ನಿಟ್ಟಿನಲ್ಲಿ ಕೆಲ ತಿಂಗಳ ಹಿಂದೆ 3 ವರ್ಷಗಳಿಗೊಮ್ಮೆ ನಡೆಯುವ ಗ್ರಾಮ ದೇವತೆ ದುರ್ಗಾದೇವಿ ಜಾತ್ರೆ ಸಂಭ್ರಮದಿಂದ ಆಚರಿಸಿದ್ದರು.</p><p>ಇನ್ನೂ ಕೆಲವರ ನಡುವೆ ಭಿನ್ನಭಿಪ್ರಾಯಗಳಿದ್ದು, ಶುಕ್ರವಾರ ಮರಕುಂಬಿ ಗ್ರಾಮದಲ್ಲಿ ದಲಿತರು, ಸವರ್ಣೀಯರು ಪರಸ್ಪರ ಬಣ್ಣ ಹಚ್ಚಿ ಶುಭಾಶಯ ವಿನಿಮಯ ಮಾಡಿಕೊಂಡು, ಬಣ್ಣದ ಓಕುಳಿ ಆಡಿ ಸಂಭ್ರಮಿಸಿದರು. ಯುವಕರು, ಹಿರಿಯರು, ಚಿಣ್ಣರು ಬಣ್ಣದ ಹಬ್ಬದಲ್ಲಿ ಭಾಗಿಯಾಗಿದ್ದರು. ಮಹಿಳೆಯರು ಅಷ್ಟೇನೂ ಆಸಕ್ತಿ ತೋರಲಿಲ್ಲ. ಎರಡು ವರ್ಷಗಳ ನಂತರ ಬಣ್ಣದ ಹಬ್ಬ ಒಟ್ಟಾಗಿ ಆಚರಿಸಿರುವುದು ಕಂಡುಬಂದಿತು.</p><p><strong>ಎಲ್ಲೆಲ್ಲಿ ಬಣ್ಣದ ಓಕುಳಿ:</strong> ತಾಲ್ಲೂಕಿನ ಹನುಮನಹಳ್ಳಿ, ಚಿಕ್ಕರಾಂಪುರ, ಆನೆಗೊಂದಿ, ಕಡೆ ಬಾಗಿಲು, ಢಣಾಪುರ, ಹೆಬ್ಬಾಳ ಸೇರಿ ಗಂಗಾವತಿ ನಗರದ ಹಿರೇಜಂತಕಲ್ ಭಾಗದಲ್ಲಿ ಬಣ್ಣದ ಓಕುಳಿ ಆಡಲಾಯಿತು. ಕೆಲ ಗ್ರಾಮಗಳಲ್ಲಿ ಯುವಕರು ಡಿಜೆ ಸದ್ದಿಗೆ ಹೆಜ್ಜೆ ಹಾಕಿದರು. ಇನ್ನೂ ಕೆಲ ಗ್ರಾಮಗಳಲ್ಲಿ ಹಲಿಗೆ, ತಾಷ ಸದ್ದಿಗೆ ಕುಣಿದರು.</p><p>ದುರ್ಗಾ ಪರಮೇಶ್ವರಿಗೆ ವಿಶೇಷ ಪೂಜೆ: ಯುಗಾದಿ ಹಬ್ಬದ ನಿಮಿತ್ತ ತಾಲ್ಲೂಕಿನ ಢಣಾಪುರ ಗ್ರಾಮದ ಗ್ರಾಮ ದೇವತೆ ದುರ್ಗಾ ಪರಮೇಶ್ವರಿ ದೇವಿಗೆ ವಿಶೇಷ ಅಲಂಕಾರ ಮಾಡುವುದರ ಜೊತೆಗೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.</p><p>ಈ ಸಂದರ್ಭದಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.</p><p><strong>ಪರಸ್ಪರ ಬಣ್ಣ ಎರಚಾಟ:</strong></p><p>ಕನಕಗಿರಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಸಡಗರ–ಸಂಭ್ರಮದಿಂದ ಓಕಳಿ ಆಡಲಾಯಿತು.</p><p>ರಾಜ್ಯದೆಲ್ಲೆಡೆ ಬಹು ತೇಕ ಹೋಳಿ ಹಬ್ಬದ ಸಮಯದಲ್ಲಿ ಬಣ್ಣದಾಟ ಆಡಿದರೆ, ಈ ಭಾಗದಲ್ಲಿಯುಗಾದಿ ಹಬ್ಬದ ಮರು ದಿನ (ಕೆಟ್ಟ ಕರಿ) ಬಣ್ಣದ ಹಬ್ಬ ಆಚರಣೆ ಮಾಡ ಲಾತ್ತಿದ್ದು, ಪಟ್ಟಣದಲ್ಲಿ ಚಿಣ್ಣರು, ಮಹಿಳೆಯರು, ಯುವತಿಯರು ಸೇರಿದಂತೆ ಗ್ರಾಮಸ್ಥರು ಪರಸ್ಪರ ಬಣ್ಣ ಎರಚಿ ಸಂತಸ ವ್ಯಕ್ತಪಡಿಸಿದರು.</p><p>ಸಣ್ಣ ಮಕ್ಕಳು ಬಾಟಲಿಗಳಲ್ಲಿ ತುಂಬಿದ ಬಣ್ಣವನ್ನು ದಾರಿ ಹೋಕರು, ಆಯಾ ಓಣಿಯ ಜನರು, ಸ್ನೇಹಿತರ ಮನೆಗೆ ತೆರಳಿ ಬಣ್ಣ ಹಾಕುತ್ತಿರುವುದು ಕಂಡು ಬಂತು. ರಾಜಬೀದಿ, ಡಾ.ಬಿ.ಆರ್.ಅಂಬೇಡ್ಕರ್, ವಾಲ್ಮೀಕಿ ವೃತ್ತ, ಪ್ರತಿ ವಾರ್ಡ್ಗಳಲ್ಲಿ ಬಣ್ಣದ ಆಟ ಗಮನ ಸೆಳೆಯಿತು.</p><p>ತೊಂಡೆತೇವರಪ್ಪ ದೇವಸ್ಥಾನದ ರಸ್ತೆ, ವಾಲ್ಮೀಕಿ ನಗರ, ಇತರೆ ಓಣಿಗಳಲ್ಲಿ ಸಮಾನ ಮನಸ್ಕ ಮಹಿಳೆಯರು ಮನೆ ಮನೆಗೆ ತೆರಳಿ ಬಣ್ಣ ಎರಚಿ ಸಂಭ್ರಮಿಸಿದರು. ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಜಾತಿ–ಧರ್ಮ ಎನ್ನದೆ ಯುವಕರು ಬಣ್ಣದಾಟದಲ್ಲಿ ತೊಡಗಿದ್ದರು.</p><p>ಬಿಸಿಲಿನ ಪ್ರಖರತೆ ಲೆಕ್ಕಿಸದೆ ಯುವಕರು ಬಣ್ಣದಲ್ಲಿ ಮಿಂದು ಕುಣಿದು ಕುಪ್ಪಳಿಸಿದರು. ತಮಟೆ, ಹಲಗಿ ಬಡಿಯುತ್ತಾ ಕೇ ಕೇ ಹಾಕುತ್ತಾ ಬಣ್ಣದಾಟ ಆಡಿದರು. ಸಂಜೆ ಕನಕಾಚಲಪತಿ ದೇವಸ್ಥಾನದಿಂದ ಎದುರ ಹನುಮಪ್ಪ ದೇಗುಲದವರೆಗೆ ಅಶ್ವರೋಹಣ ಉಚ್ಛಾಯ ವಿಜೃಂಭಣೆಯಿಂದ ನಡೆಯಿತು. ಮೂಲ ಸ್ಥಾನಕ್ಕೆ ಅಶ್ವರೋಹಣ ಉಚ್ಛಾಯ ತಲುಪಿದಾಗ, ಬಣ್ಣದಾಟಕ್ಕೆ ತೆರೆ ಬಿತ್ತು. ಅಘೋಷಿತ ಬಂದ್ ವಾತಾವರಣ ಇರುವುದು ಕಂಡುಬಂತು. ಕೆಲವರು ಹೊಲದಲ್ಲಿ ಮಾಂಸದೂಟ, ಸಸ್ಯಹಾರಿ ಊಟ ಸವಿದು ಬಣ್ಣದಾಟದಿಂದ ದೂರ ಉಳಿದರು.</p>. <p><strong>ಕಾರಟಗಿ: ಬಣ್ಣದಲ್ಲಿ ಮಿಂದೆದ್ದ ಜನ:</strong></p><p>ಕಾರಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಯುಗಾದಿಯ ಮರುದಿನವಾದ ಶುಕ್ರವಾರ ಯುವಕರು–ಯುವತಿಯರು ಹಾಗೂ ಚಿಕ್ಕಮಕ್ಕಳು ಪರಸ್ಪರ ಬಣ್ಣ ಎರಚಾಡುತ್ತಾ ಓಕುಳಿಯಾಟದ ಸಂಭ್ರಮದಲ್ಲಿದ್ದರು.</p><p>ಯುಗಾದಿ ಪಾಡ್ಯದ ಮರುದಿನದಂದು ಬಣ್ಣದಾಟ ಆಡುವ ವಾಡಿಕೆ ಈ ಭಾಗದಲ್ಲಿದೆ. ಬೆಳಗ್ಗೆಯಿಂದಲೇ ಯುವಕರು ಮತ್ತು ಚಿಕ್ಕಮಕ್ಕಳು ಹಲಗೆ ಬಾರಿಸುತ್ತಾ, ಅದರ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಕುಣಿದು ಸಂಭ್ರಮಿಸುತ್ತ ರಸ್ತೆಗಳಲ್ಲೆಲ್ಲಾ ತಿರುಗಾಡುತ್ತಾ ಸ್ನೇಹಿತರಿಗೆ, ಪರಿಚಿತರಿಗೆ ಬಣ್ಣ ಎರಚುತ್ತಾ ಸಂಭ್ರಮಿಸುತ್ತಿರುವುದು ಕಂಡುಬಂತು.</p><p>ಬಣ್ಣ ಹಾಗೂ ಬಣ್ಣ ತುಂಬಿದ ನೀರಿನ ಬಾಟಲಿಗಳನ್ನು ಹಿಡಿದು ಕೆಲವರು ತಮ್ಮ ಸ್ನೇಹಿತರ ಮನೆಗಳಿಗೆ ತೆರಳಿ ಬಣ್ಣ ಹಾಕಿ, ಅವರನ್ನೂ ತಮ್ಮೊಂದಿಗೆ ಕರೆತಂದು ಓಕುಳಿಯಾಟ ಆಡಿದರು.</p><p>ಇನ್ನು ಕೆಲ ಯುವಕರು ಕೋಳಿ ಮೊಟ್ಟೆ, ಟೊಮೆಟೊ ತಲೆ ಮೇಲೆ ಒಡೆದು ಮತ್ತೆ ಅದಕ್ಕೆ ಬಣ್ಣ ಹಾಕುತ್ತಿದ್ದರೆ, ಕೆಲವೆಡೆ ಗುಲಾಲ್ ಜೊತೆ ಪೇಂಟ್ ಬಳಕೆ ಮಾಡಿದರು. ಮೈತುಂಬಾ ಬಣ್ಣಗಳನ್ನು ಎರಚಿಕೊಂಡು ಕೇಕೇ ಹಾಕುತ್ತ ಹಲಗೆ, ತಮಟೆ ವಾದನದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಗುಂಪು ಗುಂಪಾಗಿ ಕುಣಿದಾಡುವ ದೃಶ್ಯಗಳು ಸಾಮಾನ್ಯವಾಗಿದ್ದವು.</p><p>ಬಣ್ಣದಾಟದಿಂದಾಗಿ ಪಟ್ಟಣದ ಎಲ್ಲಾ ಅಂಗಡಿ, ಹೋಟೆಲ್ಗಳು ಸೇರಿದಂತೆ ಇತರೆ ವ್ಯಾಪಾರ ವಹಿವಾಟು ಸಂಜೆಯವರೆಗೆ ಸಂಪೂರ್ಣ ಬಂದ್ ಆಗಿತ್ತು.</p><p><strong>ಎಲ್ವಿಟಿ ತಪೋವನ:</strong> ನಾಗನಕಲ್ ಬಳಿಯ ಎಲ್ವಿಟಿ ತಪೋವನದಲ್ಲಿ ನೈಸರ್ಗಿಕ ಬಣ್ಣದಾಟದ ಸಂಭ್ರಮ ಮನೆ ಮಾಡಿತ್ತು. ಪತಂಜಲಿ ಯೋಗ ಸಮಿತಿಯ ಸದಸ್ಯರು, ಸಾಧಕರು ತಮ್ಮ ಪರಿವಾರದೊಂದಿಗೆ ತೋಟದಲ್ಲಿ ನೈಸರ್ಗಿಕ ಬಣ್ಣವನ್ನು ಪರಸ್ಪರ ಎರಚಿ, ಸಂಭ್ರಮಿಸಿದರು. ತಮ್ಮ ಮನೆಗಳಿಂದ ತಂದಿದ್ದ ತರಹೇವಾರಿ ಭೋಜನವನ್ನು ಸಾಮೂಹಿಕವಾಗಿ ಸವಿದು ಖುಷಿಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>