<p><strong>ಗಂಗಾವತಿ:</strong> ಇಲ್ಲಿನ ತಾಲ್ಲೂಕು ಆಡಳಿತಸೌಧಕ್ಕೆ ನಿತ್ಯ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಉಪನೋಂದಣಿ, ಆಹಾರ, ಕಂದಾಯ, ಸಿ.ಟಿ ಸರ್ವೆ, ಚುನಾವಣೆ ವಿಭಾಗ, ಆಧಾರ್, ಜಾತಿ ಮತ್ತು ಆದಾಯ ಪ್ರಮಾಣಪತ್ರ ಸೇರಿ ಇತರೆ ಕೆಲಸಗಳಿಗೆ ಭೇಟಿ ನೀಡುತ್ತಿದ್ದು ಅವರಿಗೆ ಮೂಲ ಸೌಕರ್ಯಗಳೇ ದೊರೆಯದಂತಾಗಿದೆ. ತಾಲ್ಲೂಕು ಆಡಳಿತ ಸೌಧ ನಿರ್ವಹಣೆಯಿಲ್ಲ ಪಾಳುಬಿದ್ದ ಕಟ್ಟಡದಂತೆ ಕಾಣುತ್ತದೆ.</p>.<p>ಕಚೇರಿಗೆ ಬರುವ ಜನರಿಗೆ ತಕ್ಕಂತೆ ಕುಳಿತುಕೊಳ್ಳಲು ಕುರ್ಚಿಗಳಿಲ್ಲ. ಕೆಲವಡೆ ಇದ್ದರೂ ಮುರಿದು ಬಿದ್ದಿವೆ. ಸ್ವಚ್ಛತೆ ಮರೀಚಿಕೆಯಾಗಿದೆ. ಮೇಲ್ಮಹಡಿ ಏರುವ ಮೆಟ್ಟಿಲುಗಳು ಶಿಥಿಲಗೊಂಡಿವೆ. ಎಲ್ಲೆಂದರಲ್ಲಿ ಕಸ ಬೀಸಾಡಲಾಗಿದೆ. ತಹಶೀಲ್ದಾರ್ ಕಚೇರಿ ಮುಂದೆ ಅಡ್ಡಾದಿಡ್ಡಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ವಿವಿಧ ಇಲಾಖೆಗಳ ಕಚೇರಿಗಳಿಗೆ ಸಂಪರ್ಕ ಕಲ್ಪಿಸಿದ ವಿದ್ಯುತ್ ಬೋರ್ಡಿನ ಬಳಿ ತಂತಿಗಳು ಹೊರಬಂದು ಜೇಡಿ ಹಿಡಿದಿವೆ. ಒಂದು ತಂತಿ ತುಂಡಾದರೂ ಅಪಾಯ ತಪ್ಪಿದ್ದಲ್ಲ ಎನ್ನುವಂತ ಸ್ಥಿತಿ ಇಲ್ಲಿದೆ ಎಂದು ಸಾರ್ವಜನಿಕರು ದೂರುತ್ತಾರೆ.</p>.<p>ಬೇಸಿಗೆ ಸಮಯದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು ಕೆಲಸದ ನಿಮಿತ್ತ ಕಚೇರಿಗೆ ಬಂದು ನೀರಿನ ದಾಹ ತಣಿಸಿಕೊಳ್ಳಲು ತಾಲ್ಲೂಕು ಆಡಳಿತ ಸೌಧದಲ್ಲಿ ನೀರು ಸಿಗಲ್ಲ. ಹೆಸರಿಗೆ ಮಾತ್ರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ನಿರ್ಮಿಸಿಕೊಂಡಿದ್ದು, ನಿರ್ವಹಣೆ ಮಾಡದ ಕಾರಣಕ್ಕೆ ದುರಸ್ತಿಗೆ ಕಾದಿದೆ.</p>.<p>ಸಾರ್ವಜನಿಕರೆಲ್ಲರೂ ಅನಿವಾರ್ಯವಾಗಿ ಆಡಳಿತ ಸೌಧ ಆವರಣದಲ್ಲಿನ ನಂದಿನಿ ಪಾರ್ಲರ್ಗೆ ತೆರಳಿ ಅಲ್ಲಿಯೇ ಹಣಕೊಟ್ಟು ಕುಡಿಯುವ ನೀರು ಖರೀದಿಸಬೇಕಾಗಿದೆ. ಸಿಬ್ಬಂದಿ ಮನೆಯಿಂದಲೇ ಕುಡಿಯುವ ನೀರು ತಂದುಕೊಳ್ಳುತ್ತಾರೆ. ಸರ್ಕಾರಿ ಕಚೇರಿಯಲ್ಲಿ ಜನರಿಗೆ ಕುಡಿಯಲು ಕನಿಷ್ಠ ಮೂಲ ಸೌಕರ್ಯಗಳು ಕೂಡ ಇಲ್ಲವಾದರೆ ಹೇಗೆ ಎಂದು ಗಂಗಾವತಿ ನಿವಾಸಿ ದೇವರಾಜ ಪ್ರಶ್ನಿಸುತ್ತಾರೆ.</p>.<p>ಉದ್ಘಾಟನೆಯಾಗದ ಶೌಚಾಲಯ: ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಗರಸಭೆ ಸ್ವಚ್ಚ ಭಾರತ ಮಿಷನ್ ಅಡಿ ₹15ಲಕ್ಷ ಅನುದಾನ ಬಳಸಿ ಸಾರ್ವಜನಿಕ ಶೌಚಾಲಯ ನಿರ್ಮಿಸಿದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಅಧಿಕಾರಿಗಳು, ಸಾರ್ವಜನಿಕರು ಅನಿವಾರ್ಯ ವಾಗಿ ತಹಶೀಲ್ದಾರ್ ಕಚೇರಿ ಬಳಿಯ ಬಯಲು ಪ್ರದೇಶದಲ್ಲೆ ಮೂತ್ರ ವಿಸರ್ಜನೆಗೆ ಹೋಗಬೇಕಾಗಿದೆ. ಮಹಿಳೆಯರಿಗಂತೂ ಸಂಕಷ್ಟದ ಪರಿಸ್ಥಿತಿ.</p>.<p>ತಾಲ್ಲೂಕು ಆಡಳಿತ ಸೌಧ ಸ್ವಚ್ಷತೆ ಜನರಿಗೆ ಮಾದರಿ ಆಗುವಂತಿರಬೇಕು. ಆದರೆ ಗಂಗಾವತಿಯಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ತಹಶೀಲ್ದಾರ ಕಚೇರಿ ಮೆಟ್ಟಿಲು, ವಿವಿಧ ಇಲಾಖೆ ಕಚೇರಿ ಒಳಗೆ, ಕಚೇರಿ ಮೇಲ್ಭಾಗದಲ್ಲಿ ಮುರಿದ ಕುರ್ಚಿ, ಮತದಾನ ಪೆಟ್ಟಿಗೆ, ಹಳೆಯ ದಾಖಲೆಗಳು ಸಂಗ್ರಹಿಸಿ ಇರಿಸಲಾಗಿದೆ.</p>.<div><blockquote>ತಹಶೀಲ್ದಾರ್ ಕಚೇರಿಗೆ ಸರ್ಕಾರಿ ಸೌಲಭ್ಯ ಪಡೆಯಲು ನಿತ್ಯ ಸಾಕಷ್ಟು ಸಂಖ್ಯೆಯ ಜನರು ಬರುತ್ತಾರೆ. ಅವರಿಗೆ ಕುಡಿಯುವ ನೀರು, ಶೌಚಾಲಯ, ಕೂಡಲು ಆಸನಗಳು ಇಲ್ಲವೆಂದರೆ ಹೇಗೆ?</blockquote><span class="attribution">ಮಂಜುನಾಥ ಡಗ್ಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸಿಐಟಿಯು ಗಂಗಾವತಿ</span></div>.<div><blockquote>ತಹಶೀಲ್ದಾರ್ ಕಚೇರಿಗೆ ಬೇಕಾದ ಮೂಲ ಸೌಕರ್ಯಗಳ ಅಂದಾಜು ಪಟ್ಟಿ ರಚಿಸಿ ಕಳುಹಿಸಲಾಗಿದೆ. ನಿರುಪಯುಕ್ತ ವಸ್ತುಗಳನ್ನ ಹರಾಜು ಕರೆದು ಮಾರಾಟ ಮಾಡಿ ಸಮಸ್ಯೆ ಪರಿಹರಿಸಲಾಗುತ್ತದೆ</blockquote><span class="attribution"> ವಿಶ್ವನಾಥ ಮುರುಡಿ, ಪ್ರಭಾರಿ ತಹಶೀಲ್ದಾರ್ ಗಂಗಾವತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ:</strong> ಇಲ್ಲಿನ ತಾಲ್ಲೂಕು ಆಡಳಿತಸೌಧಕ್ಕೆ ನಿತ್ಯ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಉಪನೋಂದಣಿ, ಆಹಾರ, ಕಂದಾಯ, ಸಿ.ಟಿ ಸರ್ವೆ, ಚುನಾವಣೆ ವಿಭಾಗ, ಆಧಾರ್, ಜಾತಿ ಮತ್ತು ಆದಾಯ ಪ್ರಮಾಣಪತ್ರ ಸೇರಿ ಇತರೆ ಕೆಲಸಗಳಿಗೆ ಭೇಟಿ ನೀಡುತ್ತಿದ್ದು ಅವರಿಗೆ ಮೂಲ ಸೌಕರ್ಯಗಳೇ ದೊರೆಯದಂತಾಗಿದೆ. ತಾಲ್ಲೂಕು ಆಡಳಿತ ಸೌಧ ನಿರ್ವಹಣೆಯಿಲ್ಲ ಪಾಳುಬಿದ್ದ ಕಟ್ಟಡದಂತೆ ಕಾಣುತ್ತದೆ.</p>.<p>ಕಚೇರಿಗೆ ಬರುವ ಜನರಿಗೆ ತಕ್ಕಂತೆ ಕುಳಿತುಕೊಳ್ಳಲು ಕುರ್ಚಿಗಳಿಲ್ಲ. ಕೆಲವಡೆ ಇದ್ದರೂ ಮುರಿದು ಬಿದ್ದಿವೆ. ಸ್ವಚ್ಛತೆ ಮರೀಚಿಕೆಯಾಗಿದೆ. ಮೇಲ್ಮಹಡಿ ಏರುವ ಮೆಟ್ಟಿಲುಗಳು ಶಿಥಿಲಗೊಂಡಿವೆ. ಎಲ್ಲೆಂದರಲ್ಲಿ ಕಸ ಬೀಸಾಡಲಾಗಿದೆ. ತಹಶೀಲ್ದಾರ್ ಕಚೇರಿ ಮುಂದೆ ಅಡ್ಡಾದಿಡ್ಡಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ವಿವಿಧ ಇಲಾಖೆಗಳ ಕಚೇರಿಗಳಿಗೆ ಸಂಪರ್ಕ ಕಲ್ಪಿಸಿದ ವಿದ್ಯುತ್ ಬೋರ್ಡಿನ ಬಳಿ ತಂತಿಗಳು ಹೊರಬಂದು ಜೇಡಿ ಹಿಡಿದಿವೆ. ಒಂದು ತಂತಿ ತುಂಡಾದರೂ ಅಪಾಯ ತಪ್ಪಿದ್ದಲ್ಲ ಎನ್ನುವಂತ ಸ್ಥಿತಿ ಇಲ್ಲಿದೆ ಎಂದು ಸಾರ್ವಜನಿಕರು ದೂರುತ್ತಾರೆ.</p>.<p>ಬೇಸಿಗೆ ಸಮಯದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು ಕೆಲಸದ ನಿಮಿತ್ತ ಕಚೇರಿಗೆ ಬಂದು ನೀರಿನ ದಾಹ ತಣಿಸಿಕೊಳ್ಳಲು ತಾಲ್ಲೂಕು ಆಡಳಿತ ಸೌಧದಲ್ಲಿ ನೀರು ಸಿಗಲ್ಲ. ಹೆಸರಿಗೆ ಮಾತ್ರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ನಿರ್ಮಿಸಿಕೊಂಡಿದ್ದು, ನಿರ್ವಹಣೆ ಮಾಡದ ಕಾರಣಕ್ಕೆ ದುರಸ್ತಿಗೆ ಕಾದಿದೆ.</p>.<p>ಸಾರ್ವಜನಿಕರೆಲ್ಲರೂ ಅನಿವಾರ್ಯವಾಗಿ ಆಡಳಿತ ಸೌಧ ಆವರಣದಲ್ಲಿನ ನಂದಿನಿ ಪಾರ್ಲರ್ಗೆ ತೆರಳಿ ಅಲ್ಲಿಯೇ ಹಣಕೊಟ್ಟು ಕುಡಿಯುವ ನೀರು ಖರೀದಿಸಬೇಕಾಗಿದೆ. ಸಿಬ್ಬಂದಿ ಮನೆಯಿಂದಲೇ ಕುಡಿಯುವ ನೀರು ತಂದುಕೊಳ್ಳುತ್ತಾರೆ. ಸರ್ಕಾರಿ ಕಚೇರಿಯಲ್ಲಿ ಜನರಿಗೆ ಕುಡಿಯಲು ಕನಿಷ್ಠ ಮೂಲ ಸೌಕರ್ಯಗಳು ಕೂಡ ಇಲ್ಲವಾದರೆ ಹೇಗೆ ಎಂದು ಗಂಗಾವತಿ ನಿವಾಸಿ ದೇವರಾಜ ಪ್ರಶ್ನಿಸುತ್ತಾರೆ.</p>.<p>ಉದ್ಘಾಟನೆಯಾಗದ ಶೌಚಾಲಯ: ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಗರಸಭೆ ಸ್ವಚ್ಚ ಭಾರತ ಮಿಷನ್ ಅಡಿ ₹15ಲಕ್ಷ ಅನುದಾನ ಬಳಸಿ ಸಾರ್ವಜನಿಕ ಶೌಚಾಲಯ ನಿರ್ಮಿಸಿದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಅಧಿಕಾರಿಗಳು, ಸಾರ್ವಜನಿಕರು ಅನಿವಾರ್ಯ ವಾಗಿ ತಹಶೀಲ್ದಾರ್ ಕಚೇರಿ ಬಳಿಯ ಬಯಲು ಪ್ರದೇಶದಲ್ಲೆ ಮೂತ್ರ ವಿಸರ್ಜನೆಗೆ ಹೋಗಬೇಕಾಗಿದೆ. ಮಹಿಳೆಯರಿಗಂತೂ ಸಂಕಷ್ಟದ ಪರಿಸ್ಥಿತಿ.</p>.<p>ತಾಲ್ಲೂಕು ಆಡಳಿತ ಸೌಧ ಸ್ವಚ್ಷತೆ ಜನರಿಗೆ ಮಾದರಿ ಆಗುವಂತಿರಬೇಕು. ಆದರೆ ಗಂಗಾವತಿಯಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ತಹಶೀಲ್ದಾರ ಕಚೇರಿ ಮೆಟ್ಟಿಲು, ವಿವಿಧ ಇಲಾಖೆ ಕಚೇರಿ ಒಳಗೆ, ಕಚೇರಿ ಮೇಲ್ಭಾಗದಲ್ಲಿ ಮುರಿದ ಕುರ್ಚಿ, ಮತದಾನ ಪೆಟ್ಟಿಗೆ, ಹಳೆಯ ದಾಖಲೆಗಳು ಸಂಗ್ರಹಿಸಿ ಇರಿಸಲಾಗಿದೆ.</p>.<div><blockquote>ತಹಶೀಲ್ದಾರ್ ಕಚೇರಿಗೆ ಸರ್ಕಾರಿ ಸೌಲಭ್ಯ ಪಡೆಯಲು ನಿತ್ಯ ಸಾಕಷ್ಟು ಸಂಖ್ಯೆಯ ಜನರು ಬರುತ್ತಾರೆ. ಅವರಿಗೆ ಕುಡಿಯುವ ನೀರು, ಶೌಚಾಲಯ, ಕೂಡಲು ಆಸನಗಳು ಇಲ್ಲವೆಂದರೆ ಹೇಗೆ?</blockquote><span class="attribution">ಮಂಜುನಾಥ ಡಗ್ಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸಿಐಟಿಯು ಗಂಗಾವತಿ</span></div>.<div><blockquote>ತಹಶೀಲ್ದಾರ್ ಕಚೇರಿಗೆ ಬೇಕಾದ ಮೂಲ ಸೌಕರ್ಯಗಳ ಅಂದಾಜು ಪಟ್ಟಿ ರಚಿಸಿ ಕಳುಹಿಸಲಾಗಿದೆ. ನಿರುಪಯುಕ್ತ ವಸ್ತುಗಳನ್ನ ಹರಾಜು ಕರೆದು ಮಾರಾಟ ಮಾಡಿ ಸಮಸ್ಯೆ ಪರಿಹರಿಸಲಾಗುತ್ತದೆ</blockquote><span class="attribution"> ವಿಶ್ವನಾಥ ಮುರುಡಿ, ಪ್ರಭಾರಿ ತಹಶೀಲ್ದಾರ್ ಗಂಗಾವತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>