ಜೊತೆಗೆ ಕಳೆದ ತಿಂಗಳು ದುರ್ಗಾದೇವಿ ದೇಗುಲದ ಅಡುಗೆ ಸಿಬ್ಬಂದಿಯೊಬ್ಬರನ್ನು ಚಿರತೆಯು ಕೊಂದು ಹಾಕಿತ್ತು. ಅದೇ ಸ್ಥಳದಲ್ಲಿ ಅರಣ್ಯ ಇಲಾಖೆಯ ಇಟ್ಟಿದ್ದ ಬೋನಿಗೆ ಇದೀಗ ಚಿರತೆಯು ಸೆರೆಯಾಗಿದೆ. ಇನ್ನೂ ನಾಲ್ಕೈದು ಚಿರತೆಗಳು ಇದ್ದು, ತಾಲ್ಲೂಕಿನಲ್ಲಿ ಒಟ್ಟು ಏಳು ಬೋನ್ ಗಳನ್ನು ಅಳವಡಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಶಿವರಾಜ್ ಮೇಟಿ ಪ್ರಜಾವಾಣಿಗೆ ತಿಳಿಸಿದ್ದಾರೆ.