ಬಳಗಾನೂರಿನ ಶಿವಶಾಂತವೀರ ಶರಣರು ಶ್ರೀಮಠದ ದ್ವಾರಬಾಗಿಲಿನಿಂದ ಹಿಡಿದು ಗವಿಮಠದ ಬೆಟ್ಟದ ಮೇಲಿನ ಮರಿಶಾಂತವೀರ ಶಿವಯೋಗಿಗಳ ಗದ್ದುಗೆಯ ತನಕ ಹೂವಿನ ಹಾಸಿಗೆಯ ಮೇಲೆ ಭಕ್ತಿ ಭಾವಾವೇಷವಾಗಿ ದೀರ್ಘದಂಡ ನಮಸ್ಕಾರ ಹಾಕಿದರು.ಜಾತ್ರೆ ಸರಳವಾಗಿ ನಡೆಯುತ್ತಿದ್ದರೂ ಆಸ್ತಿಕ ಭಕ್ತರು ಗದ್ದುಗೆ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ತೇರು ಮೈದಾನದಲ್ಲಿ ಯಾವುದೇ ಪ್ರದರ್ಶನ, ಕೈಲಾಸ ಮಂಟಪದಲ್ಲಿ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮ ಇಲ್ಲ. ಒಂದು ತಿಂಗಳವರೆಗೆ ನಡೆಯುವ ಜಾತ್ರೆಯಲ್ಲಿ ತರೇವಾರಿ ತಿನಿಸು ಮಾರಾಟ ಮಾಡುವ ಅಂಗಡಿಗಳು, ಗೃಹಪಯೋಗಿ ವಸ್ತುಗಳು, ವಿಭೂತಿ, ರುದ್ರಾಕ್ಷಿ, ಸಾಹಸ ಪ್ರದರ್ಶನ ನಡೆಯುತ್ತಿದ್ದವು.