ದೀಪಗಳ ಹೊಳಪು ಒಂದೆಡೆಯಾದರೆ, ಎರಡು ವರ್ಷಗಳ ಬಳಿಕ ನಡೆದ ತೆಪ್ಪೋತ್ಸವದ ಸಡಗರ ಭಕ್ತರನ್ನು ಮಂತ್ರಮುಗ್ದರನ್ನಾಗಿಸಿತು. ಗವಿಮಠದ ಇತಿಹಾಸದಲ್ಲಿ ಮೊದಲ ಬಾರಿಗೆ ಗಂಗಾರತಿ ಮಾಡಲಾಯಿತು. ಕೆರೆಯ ಮಧ್ಯಭಾಗದಲ್ಲಿರುವ ಈಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಶಿಸ್ತುಬದ್ಧವಾಗಿ ನಿಂತಿದ್ದ ಐದು ಜನ ಭಕ್ತರತ್ತ ಮುಖ ಮಾಡಿ ಸಂಭ್ರಮದಿಂದ ಗಂಗೆಗೆ ಆರತಿ ಮಾಡುತ್ತಿದ್ದಂತೆಯೇ ಭಕ್ತರಿಂದ ‘ಗವಿಸಿದ್ದೇಶ್ವರ... ಗವಿಸಿದ್ದೇಶ್ವರ’ ಎನ್ನುವ ಘೋಷಣೆ ಮೊಳಗಿದವು.